ನಾಪೋಕ್ಲು, ಜೂ. ೫: ಸಮೀಪದ ಬಲ್ಲಮಾವಟಿ ಗ್ರಾಮ ದಲ್ಲಿ ಕಾಳಿಂಗ ಸರ್ಪವನ್ನು ಶನಿವಾರ ಸೆರೆ ಹಿಡಿಯಲಾಗಿದೆ. ಗ್ರಾಮದ ನಿವಾಸಿ ಎಡಿಕೇರಿ ಸನ್ನಿ ಅವರ ಮನೆಯ ಸೌದೆ ಕೊಟ್ಟಿಗೆ ಯಲ್ಲಿ ಇದ್ದ ೧೨ ಅಡಿ ಉದ್ದದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಉರಗ ತಜ್ಞರಾದ ಪ್ರಜ್ವಲ್ ಕುಮಾರ್ ಹಾಗೂ ಬೆಳ್ಳಿಯಪ್ಪ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವುಗಳು ಕಂಡುಬAದಲ್ಲಿ ಪ್ರಜ್ವಲ್ ಕುಮಾರ್ ಅವರ ಮೊಬೈಲ್ ಸಂಖ್ಯೆ ೯೭೪೦೩೦೪೩೩೮. ಸಂಪರ್ಕಿಸಲು ಕೋರಲಾಗಿದೆ.