ಮಡಿಕೇರಿ, ಮೇ ೨೬: ನಗರದ ದೇಚೂರಿನ ಶ್ರೀ ರಾಮ ವಿದ್ಯಾ ಗಣಪತಿ ದೇವಾಲಯದಲ್ಲಿ ತಾ. ೨೭ ರಂದು (ಇಂದು) ೨೫ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ.

ಹೆಚ್. ಆರ್. ಉದಯ್ ಕುಮಾರ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಿಗ್ಗೆ ೮.೩೦ಕ್ಕೆ ನಿರ್ಮಾಲ್ಯ, ಪುಣ್ಯಾಹ ವಾಚನ, ೯ಕ್ಕೆ ದೇವತಾ ಪ್ರಾರ್ಥನೆ, ೯.೩೦ಕ್ಕೆ ಮಹಾಗಣಪತಿ ಮೂರ್ತಿಗೆ ಅಭಿಷೇಕ, ೧೦ಕ್ಕೆ ಬಯಲು ಆಂಜನೇಯ ಪೂಜೆ, ೧೦.೩೦ಕ್ಕೆ ಅಷ್ಟದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಹೋಮ, ೧೧.೧೫ಕ್ಕೆ ನವಗ್ರಹ ಮತ್ತು ನಾಗಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಮಂಗಳಾರತಿ ನಡೆದು ೧ ಗಂಟೆಗೆ ಸಾಮೂಹಿಕ ಅನ್ನದಾನ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.