*ಗೋಣಿಕೊಪ್ಪ, ಮಾ. ೨೭: ಕಾವೇರಿ ಕರ್ನಾಟಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ನೀಡುವ ಸಾಂಸ್ಕೃತಿಕ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಜಿಲ್ಲೆಯ ಇಬ್ಬರಿಗೆ ನೀಡಲಾಗಿದೆ.

ಸಾಮಾಜಿಕ ಕ್ಷೇತ್ರದಲ್ಲಿ ಎಂ.ಎಸ್ ರಜನಿ ತಿತಿಮತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಎಂ.ಆರ್ ಅಕ್ರಮ್ ಅವರಿಗೆ ಕಾವೇರಿ ಕರ್ನಾಟಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ಜೆ.ಆರ್. ಮನೋಜ್ ಶರ್ಮಾ, ಡಾ. ಅನಿಲ್ ಶ್ರೀನಿವಾಸ್, ವೆಂಕಟೇಶ್, ಲಯನ್ ಸವಿತಾ ಶಾಸ್ತಿç, ವೆಂಕಟೇಶ್ ಕುಮಾರ್, ಹಾಜರಿದ್ದು, ಅಧ್ಯಕ್ಷತೆಯನ್ನು ಡಾ. ಕೆ. ರಘುರಾಮ್ ವಾಜಪೇಯಿ ವಹಿಸಿದ್ದರು.