ಚೆಯ್ಯಂಡಾಣೆ, ಮಾ, ೨೬: ಕರಡ ಸಮೀಪದ ಪೊದ್ದಮಾನಿ ತಿರುವಿನಲ್ಲಿ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ವೀರಾಜಪೇಟೆ ಕಡೆಯಿಂದ ತೆರಳುತ್ತಿದ್ದ ಆಲ್ಟೋ ಕಾರು (ಕೆಎ ೧೨ ಪಿ ೬೦೫೩) ಹಾಗೂ ಕಕ್ಕಬೆ ಕಡೆಯಿಂದ ವೀರಾಜಪೇಟೆ ಕಡೆಗೆ ಬರುತ್ತಿದ್ದ ಇನೋವಾ ಕಾರು (ಕೆಎ ೦೧ ಎಂಬಿ ೪೫೩೪) ನಡುವೆ ಅಪಘಾತ ಸಂಭವಿಸಿದ್ದು ಸಣ್ಣ ಪುಟ್ಟ ಗಾಯಗಳಿಂದ ಕಾರುಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ಸಂಭವಿಸಲು ರಸ್ತೆಯ ಬದಿಯಲ್ಲಿ ತೋಡಿರುವ ಗುಂಡಿ ಮುಚ್ಚದಿರುವುದೇ ಕಾರಣವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.