ಮಡಿಕೇರಿ, ಮಾ. ೨೫: ರಾಜ್ಯ ಜಾತ್ಯತೀತ ಜನತಾದಳದ ವತಿಯಿಂದ ಮೈಸೂರಿನ ರಿಂಗ್ ರೋಡ್‌ನಲ್ಲಿ ತಾ. ೨೬ ರಂದು (ಇಂದು) ನಡೆಯಲಿರುವ ಪಂಚರತ್ನ ಯಾತ್ರೆ ಮುಕ್ತಾಯ ಸಮಾರಂಭಕ್ಕೆ ಜಿಲ್ಲೆಯಿಂದ ೧,೫೦೦ ಮಂದಿ ತೆರಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾಹಿತಿ ನೀಡಿದ್ದಾರೆ.