ಮಡಿಕೇರಿ, ಜ. ೩೧: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ರಾಜ್ಯದ ವಿವಿಧ ತಾಲೂಕಿನ ತಹಶೀಲ್ದಾರ್‌ಗಳನ್ನು ಮುಂದಿನ ಆದೇಶ ತನಕ ವರ್ಗಾವಣೆ ಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇ

ಶ್ ಮೈಸೂರು ತಾಲೂಕಿನ ಹೆಚ್.ಡಿ. ಕೋಟೆ ತಾಲೂಕಿಗೆ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಿರಣ್ ಗೌರಯ್ಯ, ಜಿಲ್ಲಾಧಿಕಾರಿಯ ಚುನಾವಣಾ ತಹಶೀಲ್ದಾರ್ ಆಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿ.ಎಸ್. ರಾಜೀವ್ ನಿಯೋಜನೆಗೊಂಡಿದ್ದಾರೆ.