ವೀರಾಜಪೇಟೆ, ಜ. ೩೦ : ಮುಂಜಾನೆ ವೇಳೆ ಕಾಡಾನೆಯೊಂದು ಮನೆಯ ಆವರಣದಲ್ಲಿ ನಿಲುಗಡೆಗೊಳಿಸಿದ್ದ ವಾಹನದ ಮೇಲೆ ದಾಳಿ ನಡೆಸಿದ ಘಟನೆ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ಕುಶ ಎಂಬವರ ಮಾರುತಿ ಬೊಲೇನೊ ಕಾರು ಕಾಡಾನೆಯಿಂದ ದಾಳಿಗೆ ಒಳಗಾಗಿ ಜಖಂಗೊAಡಿದೆ.

ಹಲವು ತಿಂಗಳುಗಳಿAದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಗಳನ್ನು ಧ್ವಂಸ ಮಾಡಿದೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ಸುಬ್ಬಯ್ಯ ತಿಳಿಸಿದ್ದಾರೆ.