ಮಡಿಕೇರಿ, ಜ. ೨೭: ಎಲ್ಲಾ ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ (ಎoiಟಿಣ ಆiಡಿeಛಿಣoಡಿ) ರೀಜಿನಲ್ ಸೆಂಟರ್ ಇಸಿಹೆಚ್‌ಎಸ್ ಬೆಂಗಳೂರಿನ ಡಾಕ್ಟರ್ ಅಶ್ವಿನ್ ಅಸ್ತುರೆ ಮತ್ತು ಡಾಕ್ಟರ್ ವಿನಯ್‌ಕುಮಾರ್ ಮುತ್ತಗಿ ಅವರುಗಳು ಕ್ಯಾನ್ಸರ್ ಖಾಯಿಲೆಯ ಬಗ್ಗೆ ಮತ್ತು ಹೊಸ ೬೪ ಕೆ.ಬಿ. ಕಾರ್ಡ್ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಸೆಂಟ್ ಆ್ಯನ್ಸ್ ಚರ್ಚ್ಹಾಲ್, ವೀರಾಜಪೇಟೆ ಮತ್ತು ತಾ. ೩೧ ರಂದು ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಹಾಲ್ ಮಡಿಕೇರಿಯಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ತಾ. ೩೧ ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಔಷಧಿಗಳ ವಿತರಣೆ ಇರುವುದಿಲ್ಲ. ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ ಎಂದು ಇ.ಸಿ.ಎಚ್.ಎಸ್. ಪ್ರಕಟಣೆ ತಿಳಿಸಿದೆ.