ಮಡಿಕೇರಿ, ಡಿ. ೧೮: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ತಾಲೂಕು ಮಟ್ಟಗಳ ಬ್ರಾಹ್ಮಣ ಸಂಘಗಳು ರಾಜ್ಯದಲ್ಲೂ ಹೆಸರು ಮಾಡುವಂತಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ಸಹ ಸಂಚಾಲಕಿ ಮೂಲತಃ ಪೊನ್ನಂಪೇಟೆಯವರಾದ ಇದೀಗ ಮಂಗಳೂರಿನಲ್ಲಿ ನೆಲೆಸಿರುವ ಚೇತನಾ ದತ್ತಾತ್ರೇಯ ಹೇಳಿದರು.
ಮಡಿಕೇರಿಯ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ ಶತಮಾನ ಭವನದಲ್ಲಿ ನಡೆದ ಜಿಲ್ಲಾ ವಿಪ್ರ ಕ್ರೀಡೋತ್ಸವ ೨೦೨೨ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಬ್ರಾಹ್ಮಣರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಡೆದ ಕ್ರೀಡಾಕೂಟವು ಯಶಸ್ವಿಯಾಗಿದೆ. ಸಮಾಜದ ಬಾಂಧವರನ್ನು ಒಂದು ಕಡೆ ಸೇರಿಸಿ ಸಂಘಟಿಸಿದ ಸಲುವಾಗಿ ವಿದ್ಯಾಭಿವೃದ್ಧಿ ನಿಧಿ ಹಾಗೂ ತಾಲೂಕು ಮಟ್ಟದ ಬ್ರಾಹ್ಮಣ ಸಮಾಜಗಳನ್ನು ರಾಜ್ಯ ಮಟ್ಟದಲ್ಲಿಯೂ ಗುರುತಿಸುವಂತಾಗ ಬೇಕು ಎಂದು ಆಶಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಮಹಿಳಾ ವಿಭಾಗಕ್ಕೆ ೨೦೨೨-೨೩ನೇ ಸಾಲಿಗೆ ಕೊಡಗು ಜಿಲ್ಲಾ ಸಂಚಾಲಕಿಯಾಗಿ ನೇಮಕಗೊಂಡ ಗೀತಾ ಸಂಪತ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸವಿತಾ ಯೋಗೇಶ್ ಹಾಗೂ ಲಲಿತಾ ಹರಿನಾರಾಯಣ ಅವರುಗಳಿಗೆ ಈ ಸಂದರ್ಭ ಅಧಿಕೃತವಾಗಿ ನೇಮಕಾತಿ ಪತ್ರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ ಅವರು ಮಾತನಾಡಿ, ಮುಂದಿನ ವರ್ಷಗಳಲ್ಲಿ ಕ್ರೀಡೋತ್ಸವ ಇನ್ನೂ ವಿಜೃಂಭಣೆ ಯಿಂದ ನಡೆಯುವಂತಾಗಬೇಕು. ಮತ್ತಷ್ಟು ಕ್ರೀಡೆಗಳನ್ನು ಸೇರ್ಪಡೆ ಗೊಳಿಸುವ ಮೂಲಕ ಸಮಾಜದ ಬಾಂಧವರನ್ನು ಒಂದುಗೂಡಿಸಬೇಕು. ಯುವಕ-ಯುವತಿಯರು ಈ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.
ವಿಪ್ರ ಕ್ರೀಡೋತ್ಸವದ ಸಹ ಸಂಚಾಲಕ ಬಿ.ಕೆ ಜಗದೀಶ್ ಅವರು ಮಾತನಾಡಿ, ಜಿಲ್ಲೆಯ ಬಹುತೇಕ ಎಲ್ಲಾ ಸಮುದಾಯದವರೂ ಪ್ರತಿ ವರ್ಷ ಕ್ರೀಡಾಕೂಟ ನಡೆಸುತ್ತಾರೆ. ನಾವೂ ಕಡಿಮೆ ಇಲ್ಲ ಎಂಬುದನ್ನು ಈ ವರ್ಷ ಮೊದಲ ಬಾರಿಗೆ ಬ್ರಾಹ್ಮಣ ಸಮಾಜದ ಬಾಂಧವರಿಗೆ ಕ್ರೀಡಾಕೂಟ ಆಯೋಜಿಸುವ ಮೂಲಕ ಸಾಬೀತುಪಡಿಸಿದ್ದೇವೆ. ಕ್ರಿಕೆಟ್ನೊಂದಿಗೆ ಒಳಾಂಗಣ ಕ್ರೀಡಾಕೂಟಗಳಿಗೂ ಉತ್ತಮ ಸ್ಪಂದನ ದೊರಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಬೈಲಾಯ ಮಾತನಾಡಿ, ಬ್ರಾಹ್ಮಣರೆಂದರೆ ಕೇವಲ ಅಡುಗೆ, ಪೂಜೆಗೆ ಮಾತ್ರ ಸೀಮಿತರಲ್ಲ. ಕ್ರೀಡೆಯಲ್ಲಿಯೂ ಯಶಸ್ಸು ಸಾಧಿಸುತ್ತೇವೆ ಎಂದು ಕ್ರೀಡಾಕೂಟದ ಮೂಲಕ ತೋರಿಸಿದ್ದೇವೆ. ಕ್ರೀಡೆಗಿಂತ ಹೆಚ್ಚಾಗಿ ಸಮಾಜದ ಸಂಘಟನೆ ಬಲಿಷ್ಠವಾಗಿದೆ ಎಂದರು.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ ಸದೃಢವಾಗಿದ್ದು, ಕೆಲ ಹಿರಿಯರ ವಯಸ್ಸು ಕಡಿಮೆಯಾದಂತೆ ಭಾಸವಾಗುತ್ತಿದೆ. ೧೦-೧೫ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜ ಇದೇ ಎಂಬುದೇ ಅರಿವಿರಲಿಲ್ಲ. ಆಗಿನ ಸಂಘ ಸಮಾಜ ಸೇವೆಯಲ್ಲಿ ತೊಡಗಿತ್ತಾದರೂ ಸಮಾಜ ಬಾಂಧವರು ಒಂದೆಡೆ ಸೇರುತ್ತಿರಲಿಲ್ಲ. ಪ್ರಸ್ತುತ ನಿಧಿಯ ಆಡಳಿತ ಮಂಡಳಿಯು ಅದನ್ನು ಬದಲಾಯಿಸಿದೆ. ಇಂದು ಸಮಾಜವು ಸಂಘಟಿತವಾಗಿದೆ ಎಂದರು.
ಸಮಾಜದ ಪ್ರಮುಖ ದಾನಿಗಳಾದ ಡಾ.ರಾಜಾರಾಮ್ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಇರಬೇಕು. ಸಮಾಜದ ಸದಸ್ಯರ ಒಗ್ಗೂಡುವಿಕೆ ಯಿಂದ ಹೆಮ್ಮರ ಸೃಷ್ಟಿಯಾಗಿದೆ. ಕ್ರಿಕೆಟ್ ಪಂದ್ಯಾಟ ಸಲುವಾಗಿ ಕೆಲ ದಿನಗಳ ಹಿಂದಿನಿAದಲೇ ತಯಾರಿ ನಡೆಸುತ್ತಿದ್ದ ಸಮಾಜದ ಜನರು ದೈಹಿಕವಾಗಿ ಬಲಿಷ್ಠರಾಗಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಜನ ಸೇರಿ ನಿಧಿಯ ಶಕ್ತಿಯನ್ನು ಹೆಚ್ಚುಸುವಂತಾಗಬೇಕು ಎಂದರು.
ಕ್ರೀಡೋತ್ಸವದ ಕ್ರೀಡಾ ಸಂಚಾಲಕ ರಾಮಚಂದ್ರ ಮೂಗೂರು ಅವರು ಸ್ವಾಗತಿಸಿದರು, ಲಕ್ಷಿö್ಮ ಈಶ್ವರ್ ಭಟ್ ಹಾಗೂ ವೀಣಾ ಹೊಳ್ಳ ಅವರುಗಳು ಪ್ರಾರ್ಥನೆಗೈದರು. ವಿದ್ಯಾಭಿವೃದ್ಧಿ ನಿಧಿಯ ಕಾರ್ಯದರ್ಶಿ ಅರುಣ್ ಕುಮಾರ್ ವಂದಿಸಿದರು. ಸಮಾಜದ ಪ್ರಮುಖರಾದ ಭರತೇಶ್ ಖಂಡಿಗೆ, ಲಲಿತಾ ರಾಘವನ್, ಸವಿತಾ ಭಟ್, ಜಯಶೀಲಾ ಪ್ರಕಾಶ್, ಪ್ರಭಾಕರ ನೆಲ್ಲಿತ್ತಾಯ, ಸಂಪತ್ ಕುಮಾರ್, ಗೀತಾ ಗಿರೀಶ್, ಹಿರಿಯರಾದ ಜಿ.ಟಿ ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ಕ್ರೀಡೋತ್ಸವ - ಜಿಲ್ಲಾ ಮಟ್ಟದ ವಿಜೇತರು
ಮಕ್ಕಳಿಗೆ ಆಯೋಜಿಸಿದ್ದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಪ್ರಣಮ್ ಎಮ್.ಬಿ. ಪ್ರಥಮ, ಆರ್ಯ ಕುಶಾಲನಗರ ದ್ವಿತೀಯ ಸ್ಥಾನ ಗಳಿಸಿದರು. ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಪ್ರಥಮ, ಮನ್ವಿತ್ ದ್ವಿತೀಯ ಸ್ಥಾನ ಪಡೆದುಕೊಂಡರು. ೧ ರಿಂದ ೪ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ಗೋಣಿಚೀಲ ಓಟ ಸ್ಪರ್ಧೆಯಲ್ಲಿ ಶ್ರೀರಶ್ಮಿ ಪ್ರಥಮ, ವಿದ್ಯಾಶ್ರೀ ದ್ವಿತೀಯ, ೫ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗೋಣಿಚೀಲ ಓಟದಲ್ಲಿ ಸುಮೇದಾ ಪ್ರಥಮ ಹಾಗೂ ಅವನೀಶ್ ದ್ವಿತೀಯ ಸ್ಥಾನ Uಗಳಿಸಿದರು. ಪ್ರೌಢಶಾಲ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಕ್ಷಿ ಬಿ.ಜಿ ಪ್ರಥಮ, ಕೃಪಾಲ್ ಎಮ್.ಎಸ್ ಹಾಗೂ ಅಜಿತ್ ಕುಮಾರ್ ದ್ವಿತೀಯ ಸ್ಥಾನ ಗಳಿಸಿದರು. ಬುಕ್ ಬ್ಯಾಲೆನ್ಸಿಂಗ್ ಓಟದಲ್ಲಿ ತೇಜಶ್ರೀ ಪ್ರಥಮ, ಅಜಿತ್ ದ್ವಿತೀಯ ಸ್ಥಾನ ಗಳಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಪೂರ್ವ ಹೆಚ್.ಜಿ ಪ್ರಥಮ ಹಾಗೂ ಪ್ರತೀಕ್ಷಾ ಬಿ.ಎಮ್ ದ್ವಿತೀಯ ಸ್ಥಾನ ಗಳಿಸಿದರು. ಬಕೆಟ್ಗೆ ಬಾಲ್ ಎಸೆಯುವ ಸ್ಪರ್ಧೆಯಲ್ಲಿ ಪ್ರತೀಕ್ಷಾ ಸಿ.ಎಸ್ ಪ್ರಥಮ ಹಾಗೂ ಪ್ರತೀಕ್ಷಾ ಬಿ.ಎಮ್ ದ್ವಿತೀಯ, ಚದುರಂಗದಲ್ಲಿ ಸುಧಾ ಪ್ರಕಾಶ್ ಪ್ರಥಮ ಹಾಗೂ ವಿಷ್ಣು ಶರ್ಮಾ ದ್ವಿತೀಯ, ಕೇರಂನಲ್ಲಿ ಪವನ್ ವಸಿಷ್ಠ ಪ್ರಥಮ ಹಾಗೂ ಹಾ.ತಿ ಜಯಪ್ರಕಾಶ್ ಅವರು ದ್ವಿತೀಯ, ಹೂ ಜೋಡಣೆ ಸ್ಪರ್ಧೆಯಲ್ಲಿ ಸವಿತಾ ಭಟ್ ಪ್ರಥಮ, ಪಲ್ಲವಿ ದ್ವಿತೀಯ, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಪ್ರೇಮ ವಸಿಷ್ಠ ಪ್ರಥಮ ಹಾಗೂ ಸುಮನಾ ಶ್ರೀಹರಿ ದ್ವಿತೀಯ, ಪುರುಷರ ವಿಭಾಗದಲ್ಲಿ ಶಶಿಕಾಂತ್ ಪ್ರಥಮ ಹಾಗೂ ಈಶ್ವರ್ ದ್ವಿತೀಯ, ಪುರುಷರ ಹಗ್ಗಜಗ್ಗಾಟದಲ್ಲಿ ‘ವಕೀಲ ಬ್ರಹ್ಮರು' ತಂಡ ಜಯಗಳಿಸಿದರೆ, ‘ಮಡಿಕೇರಿ ವಿಪ್ರಾಸ್' ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಗಳಿಸಿದರು. ಪ್ರೌಢಶಾಲ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಕ್ಷಿ ಬಿ.ಜಿ ಪ್ರಥಮ, ಕೃಪಾಲ್ ಎಮ್.ಎಸ್ ಹಾಗೂ ಅಜಿತ್ ಕುಮಾರ್ ದ್ವಿತೀಯ ಸ್ಥಾನ ಗಳಿಸಿದರು. ಬುಕ್ ಬ್ಯಾಲೆನ್ಸಿಂಗ್ ಓಟದಲ್ಲಿ ತೇಜಶ್ರೀ ಪ್ರಥಮ, ಅಜಿತ್ ದ್ವಿತೀಯ ಸ್ಥಾನ ಗಳಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಪೂರ್ವ ಹೆಚ್.ಜಿ ಪ್ರಥಮ ಹಾಗೂ ಪ್ರತೀಕ್ಷಾ ಬಿ.ಎಮ್ ದ್ವಿತೀಯ ಸ್ಥಾನ ಗಳಿಸಿದರು. ಬಕೆಟ್ಗೆ ಬಾಲ್ ಎಸೆಯುವ ಸ್ಪರ್ಧೆಯಲ್ಲಿ ಪ್ರತೀಕ್ಷಾ ಸಿ.ಎಸ್ ಪ್ರಥಮ ಹಾಗೂ ಪ್ರತೀಕ್ಷಾ ಬಿ.ಎಮ್ ದ್ವಿತೀಯ, ಚದುರಂಗದಲ್ಲಿ ಸುಧಾ ಪ್ರಕಾಶ್ ಪ್ರಥಮ ಹಾಗೂ ವಿಷ್ಣು ಶರ್ಮಾ ದ್ವಿತೀಯ, ಕೇರಂನಲ್ಲಿ ಪವನ್ ವಸಿಷ್ಠ ಪ್ರಥಮ ಹಾಗೂ ಹಾ.ತಿ ಜಯಪ್ರಕಾಶ್ ಅವರು ದ್ವಿತೀಯ, ಹೂ ಜೋಡಣೆ ಸ್ಪರ್ಧೆಯಲ್ಲಿ ಸವಿತಾ ಭಟ್ ಪ್ರಥಮ, ಪಲ್ಲವಿ ದ್ವಿತೀಯ, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಪ್ರೇಮ ವಸಿಷ್ಠ ಪ್ರಥಮ ಹಾಗೂ ಸುಮನಾ ಶ್ರೀಹರಿ ದ್ವಿತೀಯ, ಪುರುಷರ ವಿಭಾಗದಲ್ಲಿ ಶಶಿಕಾಂತ್ ಪ್ರಥಮ ಹಾಗೂ ಈಶ್ವರ್ ದ್ವಿತೀಯ, ಪುರುಷರ ಹಗ್ಗಜಗ್ಗಾಟದಲ್ಲಿ ‘ವಕೀಲ ಬ್ರಹ್ಮರು' ತಂಡ ಜಯಗಳಿಸಿದರೆ, ‘ಮಡಿಕೇರಿ ವಿಪ್ರಾಸ್' ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ Àಳಿಸಿದರು. ಸ್ಪೂನ್ ಹಾಗೂ ನಿಂಬೆ ಹಣ್ಣು ಓಟದಲ್ಲಿ ಅವನೀಶ್ ಪ್ರಥಮ, ಶ್ರೀರಶ್ಮಿ ದ್ವಿತೀಯ ಸ್ಥಾನ ಹಗ್ಗಜಗ್ಗಾಟದಲ್ಲಿ ‘ಮಡಿಕೇರಿ ವಿಪ್ರಾಸ್' ಪ್ರಥಮ ಸ್ಥಾನ ಗಳಿಸಿದರೆ 'ಕುಶಾಲನಗರ ಭಜರಂಗೀಸ್' ದ್ವಿತೀಯ ಸ್ಥಾನ ಗಳಿಸಿತು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ದೀಪಿಕಾ ರಾಘವೇಂದ್ರ ಪ್ರಥಮ ಹಾಗೂ ರಮ ವಿಜಯೇಂದ್ರ ದ್ವಿತೀಯ ಸ್ಥಾನ ಗಳಿಸಿದರು.
ತಾ.೧೧ ರಂದು ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಜಯ ಗಳಿಸಿದ ಕರಡ ಗ್ರಾಮ ಕ್ರಿಕೆರ್ಸ್ ತಂಡ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಗುಡ್ಡೆಹಿತ್ಲು ಕ್ರಿಕೆರ್ಸ್ ತಂಡಗಳಿಗೆ ಬಹುಮಾನಗಳನ್ನು ನೀಡಲಾಯಿತು. ಬೆಸ್ಟ್ ಬ್ಯಾಟ್ಸ್ಮೆನ್ ಆಗಿ ಗುಡ್ಡೆಹಿತ್ಲು ತಂಡದ ಕಾರ್ತಿಕ್, ಬೆಸ್ಟ್ ಬೌಲರ್ ಆಗಿ ಗುಡ್ಡೆಹಿತ್ಲು ತಂಡದ ರಾಜೇಶ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕರಡ ತಂಡದ ಪ್ರಕಾಶ್ ತಮ್ಮದಾಗಿಸಿ ಕೊಂಡರು. ಉದಯೋನ್ಮುಖ ಆಟಗಾರನಾಗಿ ಮಡಿಕೇರಿ ವಿಪ್ರಾಸ್ ತಂಡದ ನಂದನ್ ಪ್ರಶಸ್ತಿ ಪಡೆದುಕೊಂಡರು. ಕ್ರಿಕೆಟ್ ಪಂದ್ಯವನ್ನು ಕಚ್ಚೆ ಪಂಚೆ ಧರಿಸಿ ಆಡಿದ ಬೆನಕಾ ಮಡಿಕೇರಿ ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು.
ಹೂದಾನಿ ಜೋಡಣೆಗೆ ತೀರ್ಪುಗಾರರಾಗಿ ಸಹನಾ ಗೋಪಾಲಕೃಷ್ಣ ಹಾಗೂ ನೀತಾ ಕಾರ್ಯನಿರ್ವಹಿಸಿದರು. ಚದುರಂಗ ಪಂದ್ಯವನ್ನು ಶಂಕರನಾರಾಯಣ ಹಾಗೂ ರಸಪ್ರಶ್ನೆಯನ್ನು ಸುರೇಶ್ ಅವರು ನಡೆಸಿಕೊಟ್ಟರು.