ಚೆಟ್ಟಳ್ಳಿ, ಡಿ. ೧೩: ಕೊಡಗಿನ ಇತಿಹಾಸ ಪ್ರಸಿದ್ಧ ಮಡಿಕೇರಿ ತಾಲೂಕಿನ ಕಡಗದಾಳುವಿನ ಇಗ್ಗುತಪ್ಪ ಕುರುಳಿ ಅಂಬಲ ಮಂದ್ನಲ್ಲಿ ಪುತ್ತರಿ ಕೋಲಾಟ್ ಸಂಪ್ರದಾಯ ಬದ್ಧವಾಗಿ ನಡೆಯಿತು.
ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಊರಿನವರು ರಾತ್ರಿ ೮ ಗಂಟೆಗೆ ಈಡ್ ತೆಗೆದರು. ಪುತ್ತರಿ ಹಬ್ಬದಂದು ಮಂದ್ನಲ್ಲಿ ದೇವ ನೆಲೆಗೆ ಕದಿರು ಕಟ್ಟಿ ಎರಡು ದಿನಗಳ ನಂತರ ಸಂಜೆ ೫ ಗಂಟೆಗೆ ಸಂಪ್ರದಾಯಬದ್ಧವಾಗಿ ಊರಿನವರ ಸಮ್ಮುಖದಲ್ಲಿ ಮಂದ್ ತೊರ್ಪ ಕಾರ್ಯಕ್ರಮ ನೆರವೇರಿತು. ೫ನೇ ದಿನ ನಾಡ್ಕೋಲ್, ಅಂದು ಪಾಂಡಿರ ಕುಟುಂಬದ ದೇಶತಕ್ಕರು, ಪೊನ್ನಚೆಟ್ಟಿರ ಕುಟುಂಬದ ಪೊರೆನಾಲ್ಕುನಾಡು ತಕ್ಕರು, ಕೊರವಂಡ ಕುಟುಂಬದ ಊರುತಕ್ಕರು, ಒಟ್ಟು ೭ ನಾಡಿನ ತಕ್ಕರು, ಊರಿನವರೆಲ್ಲ ಸೇರಿ ಸಂಪ್ರದಾಯಭರಿತವಾಗಿ ಆಚರಿಸಿದರು.
ಮಧ್ಯಾಹ್ನ ಊರಿನವರೆಲ್ಲ ಸೇರಿ ಊರುತಕ್ಕರಾದ ಕೊರವಂಡ ಕುಟುಂಬದ ಐನ್ಮನೆಗೆ ತೆರಳಿ ಉಟೋಪಚಾರ ಮುಗಿಸಿ ಸಾಂಪ್ರದಾ ಯಿಕ ವಾಲಗ ತಳಿಯಕ್ಕಿ ಬೊಳ್ಚ, ದುಡಿಕೊಟ್ಟ್ ಪಾಟ್ನೊಂದಿಗೆ ಮಂದ್ಗೆ ಕರೆತರಲಾಯಿತು. ದೇಶತಕ್ಕರನ್ನು ನಾಡ್ ತಕ್ಕರನ್ನು ಮಂದ್ಗೆ ಸಂಪ್ರದಾಯ ಬದ್ಧವಾಗಿ ಕರೆತಂದು ದೇವನೆಲೆಯಲ್ಲಿ ಸತ್ಕರಿಸಲಾಯಿತು. ದೇಶತಕ್ಕರು, ಊರುತಕ್ಕರು, ನಾಡುತಕ್ಕರು ಕೋಲಾಟ್, ಪರೆಯಕಳಿಯನ್ನು ಪ್ರದರ್ಶಿಸಿದರು. ಹಿರಿಯರು-ಕಿರಿಯರು ಸಾಲಾಗಿ ಹೆಜ್ಜೆ ಹಾಕಿದರು. ತಕ್ಕಮುಖ್ಯಸ್ಥರಿಗೆ, ನೆಂಟರಿಸ್ಟರಿಗೆ, ಊರಿನವರೆಲ್ಲ ಫಲಹಾರ ಸವಿದರು. ತಕ್ಕಮುಖ್ಯಸ್ಥರನ್ನು ಮಂದ್ನಿAದ ದುಡಿಕೊಟ್ಟ್ ವಾಲಗದೊಂದಿಗೆ ಬೀಳ್ಕೊಟ್ಟರೆ, ಕೊರವಂಡ ಕುಟುಂಬದ ಊರುತಕ್ಕರನ್ನು ಕೊರವಂಡ ಐನ್ಮನೆಗೆ ವಾಲಗ ದುಡಿಕೊಟ್ ಹಾಡಿನೊಂದಿಗೆ ಬೀಳ್ಕೊಡಲಾಯಿತು. ಮಂಗಳವಾರ ವಾರ ಸಂಜೆ ೭ ಗಂಟೆಗೆ ವಿಷ್ಣು ಮೂರ್ತಿ ಪೂಜೆ ಸಲ್ಲಿಸಿ ಕೋಲನ್ನು ಮಂದ್ನ ದೇವನೆಲೆಯಲ್ಲಿ ಒಪ್ಪಿಸಲಾಯಿತು.
ಈ ಕುರುಳಿ ಅಂಬಲಮAದ್ನಲ್ಲಿ ಕೋಲನ್ನು ಒಪ್ಪಿಸಿದ ನಂತರ ಕೊಡಗಿನಲ್ಲಿ ಎಲ್ಲೂ ಕೋಲ್ ಹಿಡಿವ ಹಾಗಿಲ್ಲವೆಂಬ ಕಟ್ಟು ಪಾಡಿದೆ.