ಸೋಮವಾರಪೇಟೆ, ಡಿ. ೧: ಸಂಸ್ಕೃತ ಭಾರತಿ, ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಸಹಯೋಗದಲ್ಲಿ ತಾ. ೪ ರಂದು ಸಂಜೆ ೪.೩೦ಕ್ಕೆ ಸೋಮೇಶ್ವರ ದೇವಾಲಯದಲ್ಲಿ ‘ಗೀತಾ ಜಯಂತಿ’ ಕಾರ್ಯಕ್ರಮ ನಡೆಯಲಿದೆ.

ಶ್ರೀ ಭಗವದ್ಗೀತೆಯ ಧ್ಯಾನ ಶ್ಲೋಕಗಳನ್ನು ಮತ್ತು ೧೨ನೇ ಅಧ್ಯಾಯದ ಭಕ್ತಿ ಯೋಗದ ಶ್ಲೋಕಗಳನ್ನು ಪಾರಾಯಣ ನಡೆಸಲಾಗುವದು. ಆಸಕ್ತರು, ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.