ಸೋಮವಾರಪೇಟೆ, ನ.೨೩: ತಾಲೂಕಿನ ಶನಿವಾರಸಂತೆ-ಗುಡುಗಳಲೆ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯ ಗುಡುಗಳಲೆ ಬಳಿ ಗುಂಡಿ ಬಿದ್ದು ಸಂಚಾರಕ್ಕೆ ತೊಡಕಾಗಿದ್ದನ್ನು ಮನಗಂಡ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಂಕ್ರಿಟ್ ಬಳಸಿ ದುರಸ್ತಿಪಡಿಸಿದರು.

ಕಳೆದ ಕೆಲವು ಸಮಯದಿಂದ ರಸ್ತೆಯ ನಡುಭಾಗದಲ್ಲಿ ಗುಂಡಿ ನಿರ್ಮಾಣವಾಗಿದ್ದು, ಇದನ್ನು ಮುಚ್ಚುವ ಗೋಜಿಗೆ ಲೋಕೋಪಯೋಗಿ ಹೋಗಿರಲಿಲ್ಲ. ರಸ್ತೆಯ ಗುಂಡಿಯಿAದ ಹಲವಷ್ಟು ಬಾರಿ ಅವಘಡಗಳು ಸಂಭವಿಸಿದ್ದರೂ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ.

ಇದನ್ನು ಮನಗಂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಜೆಲ್ಲಿ, ಸಿಮೆಂಟ್, ಎಂ.ಸ್ಯಾAಡ್ ಬಳಸಿ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿದರು. ಶ್ರಮದಾನದಲ್ಲಿ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮೇನಳ್ಳಿ ಪ್ರವೀಣ್, ಅರುಣ, ರಾಜಣ್ಣ, ನಂದಿಗುAದ ಭರತ್, ಮಂಜು ಅವರುಗಳು ಪಾಲ್ಗೊಂಡಿದ್ದರು.