ಮಡಿಕೇರಿ, ಅ. ೪: ಬಾಡಗರಕೇರಿ ಗ್ರಾಮದ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಆಯುಧ ಪೂಜೆ ನಡೆಸಲಾಯಿತು. ಸ್ಥಳೀಯರು ಸೇರಿದಂತೆ ಆಗಮಿಸಿದ್ದ ಭಕ್ತಾದಿಗಳ ವಾಹನಗಳಿಗೆ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ಪೂಜೆ ನಡೆಯಿತು. ಇದರೊಂದಿಗೆ ದೇವಾಲಯದಲ್ಲಿ ಎಂದಿನ ಪೂಜಾ ವಿಧಿವಿಧಾನಗಳೂ ಜರುಗಿದವು.