ಮಡಿಕೇರಿ, ಅ. ೪: ಮಾದಾಪುರ ಜಂಬೂರು ಬಾಣೆಯ ಎಫ್‌ಎಂಸಿ ಕಾರ್ಯಪ್ಪ ಬಡಾವಣೆಯಲ್ಲಿ ಪ್ರಕೃತಿ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಆಯುಧ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ಕಸ್ತ್ತೂರಿ ಹಾಗೂ ಸದಸ್ಯರು ಹಾಜರಿದ್ದರು.

ಎಫ್‌ಎಂಸಿ ಕಾರ್ಯಪ್ಪ ಬಡಾವಣೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ತೀರ್ಥಪ್ರಸಾದ್, ಉಪಾಧ್ಯಕ್ಷ ಜಯಕುಮಾರ್, ಖಜಾಂಚಿ ರೀಟಾ ಅಹಮ್ಮದ್, ಸದಸ್ಯರಾದ ರಾಮಣ್ಣ, ಜಯ ಹಾಗೂ ಲೇಔಟ್‌ನ ನಿವಾಸಿಗಳು ಪಾಲ್ಗೊಂಡಿದ್ದರು. ಅಲ್ಲಿಯ ನಿವಾಸಿ ರಾಘವ ಕೆ. ಆಯುಧಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.