ಸೋಮವಾರಪೇಟೆ, ಸೆ. ೨೯: ಗೊಬ್ಬರ ತುಂಬಿಸಿಕೊAಡು ತೆರಳುತ್ತಿದ್ದ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಜೀಪ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಡಿ.ಎಂ. ನಿಂಗಪ್ಪ ಮತ್ತು ಜಾಜಿ ಅವರ ಪುತ್ರ ದಿಲೀಪ್ (೪೧) ಎಂಬವರೇ ಸಾವನ್ನಪ್ಪಿದ ದುರ್ದೈವಿ. ತಾ. ೨೮ರಂದು ಪಟ್ಟಣದಿಂದ ೬ ಚೀಲ ಗೊಬ್ಬರವನ್ನು ತುಂಬಿಸಿಕೊAಡು ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ತೋಳೂರುಶೆಟ್ಟಳ್ಳಿ-ನಡ್ಲಕೊಪ್ಪ ಮಾರ್ಗದ ಏರುರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದೆ.

ಪರಿಣಾಮ ಮುಂದಕ್ಕೆ ಚಲಿಸುತ್ತಿದ್ದ ಜೀಪ್ ಒಮ್ಮಿಂದೊಮ್ಮೆಲೆ ಹಿಂದಕ್ಕೆ ಚಲಿಸಿ ಮಗುಚಿಕೊಂಡಿದೆ. ಈ ಸಂದರ್ಭ ವಾಹನದ ಅಡಿಭಾಗಕ್ಕೆ ಸಿಲುಕಿದ ದಿಲೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ರಮೇಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತ ದಿಲೀಪ್ ಅವರು ಪತ್ನಿ ಪ್ರಿಯಾ ಸೇರಿದಂತೆ ೩ ಮತ್ತು ೫ ವರ್ಷ ಪ್ರಾಯದ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.