ಮಡಿಕೇರಿ, ಸೆ. ೧೩: ಪ್ರಾಕೃತಿಕ ವಿಕೋಪದಿಂದಾಗಿ ಹಾನಿಗೊಳಗಾದ ಊರುಬೈಲು ಸೇತುವೆಯಲ್ಲಿ ಸಂಗ್ರಹವಾಗಿದ್ದ ದೊಡ್ಡ ಪ್ರಮಾಣದ ಮರಗಳನ್ನು ತಾ. ೧೧ ರಂದು ಶ್ರೀ ಭಗವಾನ್ ಸಂಘದ ಸದಸ್ಯರು ಯಂತ್ರಗಳ ಮೂಲಕ ತೆರವುಗೊಳಿಸಿ ದರು. ಸೇತುವೆಯನ್ನು ಮತ್ತೆ ಸಂಚಾರಕ್ಕೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು, ಗೌರವಾಧ್ಯಕ್ಷ ಅನಂತ್ ಊರುಬೈಲು ಅವರ ಮುಂದಾಳತ್ವದಲ್ಲಿ ಶ್ರಮದಾನ ನಡೆಸಿದರು. ಶ್ರಮದಾನದಲ್ಲಿ ಸಂಘದ ಅಧ್ಯಕ್ಷ ಯತೀಶ ಹನಿಯಡ್ಕ, ಕಾರ್ಯದರ್ಶಿ ಶರತ್ ಹೊಸೂರು ಒಳಗೊಂಡAತೆ ಸುಮಾರು ೨೦ ಮಂದಿ ಭಾಗವಹಿಸಿದ್ದರು.