ಮಡಿಕೇರಿ, ಸೆ.೧೬: ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಗದ್ದಿಗೆ ಮತ್ತು ಗಾಳಿಬೀಡು ಫೀಡರ್ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದ ರಿಂದ ತಾ. ೧೭ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಸಂಪಿಗೆಕಟ್ಟೆ, ಕನ್ನಂಡಬಾಣೆ ಬೀರಪ್ಪ ದೇವಸ್ಥಾನ, ತ್ಯಾಗರಾಜ ಕಾಲೊನಿ, ಗದ್ದಿಗೆ, ಆಜಾದ್ ನಗರ, ಉಕ್ಕುಡ, ರಾಜೇಶ್ವರಿನಗರ, ಎ.ವಿ.ಶಾಲೆ, ಮಹದೇವಪೇಟೆ, ಮಲ್ಲಿಕಾರ್ಜುನ ನಗರ, ಭಗವತಿನಗರ, ಹಿಲ್ ರಸ್ತೆ, ರಾಣಿಪೇಟೆ, ಮಾರ್ಕೆಟ್, ಕಾನ್ವೆಂಟ್ ಜಂಕ್ಷನ್, ಸಿದ್ದಿಕಾಡು, ಕ್ಲಬ್ ಮಹೇಂದ್ರ, ಗಾಳಿಬೀಡು, ಕಾಲೂರು, ಕೂಟುಹೊಳೆ, ಮೊಣ್ಣಂಗೇರಿ, ವಣಚಲು, ಮಾಂದಲ್ಪಟ್ಟಿ, ಹೆಬ್ಬೆಟ್ಟಗೇರಿ, ಕೆ.ನಿಡುಗಣೆ, ಅಬ್ಬಿಫಾಲ್ಸ್ ರಸ್ತೆ, ದೇವಸ್ತೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.