ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಸೆ. ೧೫: ಕೇಂದ್ರ ವಾಣಿಜ್ಯ ಸಚಿವಾಲಯ ಕಾಫಿ ಮಂಡಳಿಗೆ ನೂತನ ಸದಸ್ಯರುಗಳನ್ನು ನೇಮಿಸಿದ್ದು ಇದರಲ್ಲಿ ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧಿತ್ವ ನೀಡಿಲ್ಲ ಎಂದು ಬೆಳೆಗಾರ ಸಂಘಟನೆಗಳು ದೂರಿಕೊಂಡಿವೆ.

ಕಾಫಿ ಬೆಳೆಗಾರರ ಮತ್ತು ಉದ್ಯಮದ ಏಳಿಗೆಗಾಗಿ ದುಡಿಯುತ್ತಿ ರುವ ಕಾಫಿ ಮಂಡಳಿಯಲ್ಲಿ ಅಧ್ಯಕ್ಷರೂ ಸೇರಿದಂತೆ ೩೩ ಸದಸ್ಯರುಗಳಿದ್ದು ಕೇಂದ್ರ ಸರ್ಕಾರ ಬುಧವಾರ ಒಟ್ಟು ೩೦ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಎಂದಿನAತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಓರ್ವ ಲೋಕಸಭಾ ಸದಸ್ಯರಿಗೆ ಸ್ಥಾನ ನೀಡುವ ಜತೆಗೇ ಈ ಬಾರಿ ಆಂಧ್ರಪ್ರದೇಶದ ಓರ್ವ ಸದಸ್ಯರಿಗೂ ಸ್ಥಾನ ನೀಡಲಾಗಿದೆ.

ಮಂಡಳಿಯ ಸದಸ್ಯತ್ವದಲ್ಲಿ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದ್ದು ಇದರಲ್ಲಿ ಮೊದಲು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ತಲಾ ಓರ್ವ ಐಎಎಸ್ ಅಧಿಕಾರಿಗಳಿಗೆ ಸ್ಥಾನ ನೀಡಲಾಗುತ್ತಿದ್ದರೆ, ಈ ಬಾರಿ ಆಂಧ್ರಪ್ರದೇಶದ ಓರ್ವ ಐಎಎಸ್ ಅಧಿಕಾರಿಗೂ ಸ್ಥಾನ ನೀಡಲಾಗಿದೆ. ಈಶಾನ್ಯ ರಾಜ್ಯಗಳಿಂದ ಓರ್ವ ಐಎಎಸ್ ಅಧಿಕಾರಿಗೆ ಸ್ಥಾನ ನೀಡುತ್ತಿದ್ದು ಈ ಬಾರಿ ಇಬ್ಬರು ಅಧಿಕಾರಿಗಳಿಗೆ ಸದಸ್ಯತ್ವ ನೀಡಲಾಗಿದೆ.

ಇನ್ಸ್ಟಂಟ್ ಕಾಫಿ ತಯಾರಕ ಪ್ರಾತಿನಿಧಿತ್ವ ಮೊದಲಿಗೆ ಕರ್ನಾಟಕಕ್ಕೆ ಸಿಗುತ್ತಿತ್ತು. ಅದು ಈ ಬಾರಿ ಆಂಧ್ರಪ್ರದೇಶದ ಕಾಫಿ ತಯಾರಕ ರೊಬ್ಬರಿಗೆ ಸಿಕ್ಕಿದೆ. ಗ್ರಾಹಕ ವರ್ಗದಿಂದ ಇಬ್ಬರು ಸದಸ್ಯರಿಗೆ ಅವಕಾಶವಿದ್ದು ಈ ಬಾರಿ ಮಧ್ಯಪ್ರದೇಶ ಮತ್ತು ಮಹಾರಾಷ್ಟçದಿಂದ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕಾರ್ಮಿಕ ವಲಯದಿಂದ ಈ ಹಿಂದೆ ಮೂವರು ಸದಸ್ಯರನ್ನು ನೇಮಿಸಲಾಗು ತ್ತಿದ್ದು ಈ ಬಾರಿ ಇಬ್ಬರಿಗೆ ನೀಡಲಾಗಿದೆ.

ದೊಡ್ಡ ಕಾಫಿ ಬೆಳೆಗಾರ ವರ್ಗದಿಂದ ಮೂವರಿಗೆ ಸದಸ್ಯತ್ವ ನೀಡಲಾಗಿದ್ದು ಈ ಬಾರಿ ತಮಿಳುನಾಡಿನಿಂದ ಇಬ್ಬರು ಮತ್ತು ಚಿಕ್ಕಮಗಳೂರಿನಿಂದ ಒಬ್ಬರಿಗೆ ನೀಡಲಾಗಿದೆ. ಹಿಂದೆ ರಾಜ್ಯದಿಂದ ಇಬ್ಬರು ದೊಡ್ಡ ಬೆಳೆಗಾರರಿಗೆ ಅವಕಾಶ ನೀಡಲಾಗಿತ್ತು. ಸಣ್ಣ ಕಾಫಿ ಬೆಳೆಗಾರ ವಲಯದಿಂದ ಒಟ್ಟು ೭ ಸದಸ್ಯರುಗಳಿಗೆ ಅವಕಾಶ ಇದ್ದು ಇದರಲ್ಲಿ ಈ ಬಾರಿ ಆಂಧ್ರಪ್ರದೇಶದ ಇಬ್ಬರು ಸದಸ್ಯರುಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಆಂಧ್ರಪ್ರದೇಶಕ್ಕೆ ಅವಕಾಶ ನೀಡಿರಲಿಲ್ಲ.

ಕಾಫಿ ವ್ಯಾಪಾರಿ ವಲಯದಿಂದ ಚಿಕ್ಕಮಗಳೂರು, ತಮಿಳುನಾಡು ಮತ್ತು ಆಂಧ್ರಪ್ರದೇಶದ ತಲಾ ಓರ್ವರಿಗೆ ಸ್ಥಾನ ನೀಡಲಾಗಿದೆ. ಈ ಹಿಂದೆ ಈ ಮೂರೂ ಸ್ಥಾನಗಳನ್ನು ಕರ್ನಾಟಕ ದಿಂದಲೇ ಆಯ್ಕೆ ಮಾಡಲಾಗುತಿತ್ತು. ಕಾಫಿ ಸಂಸ್ಕರಣಾ ವಿಭಾಗದಿಂದ ಈರ್ವರಿಗೆ ಅವಕಾಶ ಇದ್ದು ಚಿಕ್ಕಮಗಳೂರಿನಿಂದಲೇ ಈರ್ವರು ಸದಸ್ಯರಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಕೊಡಗಿನಿಂದಲೇ ಈರ್ವರಿಗೆ ಅವಕಾಶ ನೀಡಲಾಗಿತ್ತು.

ಕಾಫಿ ಮಂಡಳಿಯ ನೂತನ ಸದಸ್ಯತ್ವದ ಕುರಿತು ಪ್ರತಿಕ್ರಿಯಿಸಿದ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಅವರು ಮಂಡಳಿಯಲ್ಲಿ ಜಿಲ್ಲೆ ಮತ್ತು ರಾಜ್ಯಕ್ಕೆ ಪ್ರಾತಿನಿಧಿತ್ವ ಕಡಿಮೆ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದೇಶದ ಕಾಫಿ ಉತ್ಪಾದನೆಯಲ್ಲಿ ಶೇ. ೭೦ ರಷ್ಟನ್ನು ಹೊಂದಿರುವ ರಾಜ್ಯ ಮತ್ತು ಶೇ. ೩೦ಕ್ಕೂ ಅಧಿಕ ಪಾಲನ್ನು ಹೊಂದಿರುವ ಕೊಡಗು ಜಿಲ್ಲೆಗೆ ನೀಡಿರುವ ಪ್ರಾತಿನಿಧ್ಯ ಬಿಜೆಪಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಕಡಿಮೆ ಆಗಿದೆ ಎಂದು ಅವರು ಹೇಳಿದರು.

ಈ ಹಿಂದೆ ೨೦೦೮ ರ ಅವಧಿಯಲ್ಲಿ ತಾವು ಮಂಡಳಿಯ ಸದಸ್ಯರಾಗಿದ್ದಾಗ ಜಿಲ್ಲೆಯಿಂದ ತಾರಾ ಐಯ್ಯಮ್ಮ, ವೀರಾಜಪೇಟೆಯ ಅಪ್ಪಚ್ಚು, ವಿಮಲಾ ಗೋಪಾಲ್ ಮತ್ತು ಕುಶಾಲನಗರದ ಕಾಫಿ ಸಂಸ್ಕರಣಾದಾರ ರೊಬ್ಬರು ಸೇರಿದಂತೆ ಜಿಲ್ಲೆಯಿಂದ ಐವರಿಗೆ ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದರು.