ಕುಶಾಲನಗರ, ಸೆ. ೯: ಇನ್ನರ್ ವೀಲ್ ಜಿಲ್ಲೆ ೩೧೮ರ ೫೩ನೇ ಜಿಲ್ಲಾ ರ‍್ಯಾಲಿ ತಾ. ೧೧ ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕುಶಾಲನಗರ ಇನ್ನರ್ ವೀಲ್‌ಕ್ಲಬ್ ಅಧ್ಯಕ್ಷೆ ಅಶ್ವಿನಿ ಪುರುಷೋತ್ತಮ್ ರೈ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಶಾಲನಗರದಲ್ಲಿ ಕಳೆದ ೮ ವರ್ಷಗಳಿಂದ ಇನ್ನರ್ ವೀಲ್ ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿದೆ. ಇದೀಗ ಪ್ರಥಮ ಬಾರಿಗೆ ‘ಖುಷಿ’ ಹೆಸರಿನಲ್ಲಿ ಹಮ್ಮಿಕೊಳ್ಳಲಾದ ಇನ್ನರ್ ವೀಲ್ ೩೧೮ ಜಿಲ್ಲಾ ಮಟ್ಟದ ರ‍್ಯಾಲಿ ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆಯಲಿದೆ. ರ‍್ಯಾಲಿಗೆ ಜಿಲ್ಲಾ ಚೇರ್‌ಮನ್ ಕವಿತಾ ನಿಯತ್ ಅವರು ಬೆಳಿಗ್ಗೆ ೯.೧೫ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇನ್ನರ್ ವೀಲ್ ಜಿಲ್ಲೆ ೩೧೮ರ ಒಟ್ಟು ೪೮ ಕ್ಲಬ್‌ಗಳಿಂದ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ೫೦೦ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವಿನಿ ರೈ ತಿಳಿಸಿದರು.

ಕೊಡಗು ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ ಎಂದು ರ‍್ಯಾಲಿ ಚೇರ್‌ಮನ್ ಸುನೀತಾ ಮಹೇಶ್ ತಿಳಿಸಿದ್ದಾರೆ. ಮಧ್ಯಾಹ್ನತನಕ ನಡೆಯಲಿರುವ ರ‍್ಯಾಲಿಯಲ್ಲಿ ಸದಸ್ಯರ ಮಕ್ಕಳಿಂದ ಮತ್ತು ಇನ್ನರ್ ವೀಲ್ ಸದಸ್ಯರಿಂದ ಮನರಂಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು. ಇನ್ನರ್ ವೀಲ್ ಸ್ಥಾಪಕ ಅಧ್ಯಕ್ಷೆ ಆರತಿ ಹೆಚ್. ಶೆಟ್ಟಿ, ಕಾರ್ಯದರ್ಶಿ ಅಶ್ವಿನಿ ಆರ್. ಕುಮಾರ್, ಖಜಾಂಚಿ ದೀಪ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಕವಿತಾ ಸಾತಪ್ಪನ್, ರೂಪ ಉಮಾಶಂಕರ್, ಸುಪ್ರೀತಾ ರವಿ, ಚಿತ್ರ ರಮೇಶ್, ದಿವ್ಯ ಸುಜಯ್ ಅವರುಗಳು ಸುದ್ದಿಗೊಷ್ಠಿಯಲ್ಲಿ ಇದ್ದರು.