ಶನಿವಾರಸAತೆ, ಸೆ. ೨: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯ ಸೇವನೆ ಮಾಡಿ ಸ್ಕೂಟರ್ ಚಾಲನೆ ಮಾಡುತ್ತಿದ್ದ ಸ್ಕೂಟರ್ ಚಾಲಕನಿಗೆ ಸೋಮವಾರಪೇಟೆ ನ್ಯಾಯಾಲಯ ರೂ.೧೧,೨೦೦ ದಂಡ ವಿಧಿಸಿದೆ.

ಶನಿವಾರಸಂತೆ ಕಿತ್ತೂರು ರಾಣಿ ವೃತ್ತದಲ್ಲಿ ಶಿವರಳ್ಳಿ ಗ್ರಾಮದ ನಿಂಗೇಗೌಡ ಮದ್ಯ ಸೇವಿಸಿ ತನ್ನ ಸ್ಕೂಟರನ್ನು ಚಾಲನೆ ಮಾಡುತ್ತಿದ್ದು, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾಗ ಈ ಸ್ಕೂಟರ್ ಚಾಲಕನನ್ನು ಆಲ್ಕೋಮೀಟರ್‌ಗೆ ಒಳಪಡಿಸಲಾಗಿ, ಮದ್ಯ ಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ. ಸ್ಕೂಟರನ್ನು ವಶಪಡಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಚಾಲಕ ತಾ.೨ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಚಾಲಕನಿಗೆ ರೂ.೧೧,೨೦೦ ದಂಡ ವಿಧಿಸಿದೆ.