ಶ್ರೀಮಂಗಲ, ಆ. ೭: ಪೊನ್ನಂಪೇಟೆ ತಾಲೂಕು ಬಿರುನಾಣಿ, ಶ್ರೀಮಂಗಲ, ಕುಟ್ಟ, ಟಿ.ಶೆಟ್ಟಿಗೇರಿ, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೫ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಿರುನಾಣಿ ಗ್ರಾಮದ ಬೆಳೆಗಾರ ಚೊಟ್ಟಂಗಡ ಬೋಸ್ ಅವರ ಮನೆಯ ಸಮೀಪ

(ಮೊದಲ ಪುಟದಿಂದ)ಕಾಫಿ ತೋಟದಲ್ಲಿ ಶನಿವಾರ ರಾತ್ರಿ ಜಲಸ್ಫೋಟ ಸಂಭವಿಸಿದೆ. ಕಾಫಿ ತೋಟದ ನಡುವೆ ನದಿಯಂತೆ ಹರಿದ ನೀರಿನಿಂದ ಮಣ್ಣು, ಕಲ್ಲು ಸಹಿತ ಕೊಚ್ಚಿಹೋಗಿ ಕಂದಕ ಉಂಟಾಗಿದೆ. ರಭಸವಾಗಿ ಹರಿದ ನೀರಿನಿಂದ ಕಾಫಿ ತೋಟಕ್ಕೆ ಅಪಾರ ನಷ್ಟ ಉಂಟಾಗಿದೆ.

ಕಾಫಿ ತೋಟದ ಹಲವೆಡೆ ಬಿರುಕು ಬಿಟ್ಟಿದ್ದು, ಮತ್ತೆ ಮಳೆ ಹೆಚ್ಚಾದರೆ ಬಿರುಕು ಬಿಟ್ಟಿರುವ ಜಾಗದಲ್ಲಿ ಜಲಸ್ಫೋಟ ಉಂಟಾಗುವ ಅಪಾಯ ಎದುರಾಗಿದೆ. ಜಲಸ್ಫೋಟದಿಂದ ತೋಟದ ನಡುವೆ ನದಿಯಂತೆ ಹರಿದಿರುವ ನೀರಿನಿಂದ ಫಸಲು ಬರುವ ಕಾಫಿ ಗಿಡಗಳು ಕೊಚ್ಚಿಹೋಗಿದೆ.