ಮಡಿಕೇರಿ, ಜೂ. ೨೪: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿಯ ಟಿ.ಜಾನ್ ಲೇಔಟ್‌ನ ಮಹಮ್ಮದ್ ಮೊಹ್ಸಿನ್ (೪೩), ಹಾಕತ್ತೂರಿನ ಕರುಣಾ ಕುಮಾರ್ (೨೭) ಮತ್ತು ಅಪ್ಪಂಗಳ ಹೆರವನಾಡು ಗ್ರಾಮದ ಪ್ರತಾಪ್ ಕುಮಾರ್ ಬಂಧಿತ ಆರೋಪಿಗಳು.

ತಾಳತ್ತಮನೆ ಜಂಕ್ಷನ್ ಬಸ್ ಶೆಲ್ಟರ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ

(ಮೊದಲ ಪುಟದಿಂದ) ಪೊಲೀಸರು ರೂ. ೧೫ ಸಾವಿರ ಮೌಲ್ಯದ ೬೮೦ ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನ, ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ರವಿಕಿರಣ್, ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ಪ್ರಸನ್ನ, ಸೋಮಶೇಖರ್ ಸಜ್ಜನ, ದಿನೇಶ್, ಮಧು, ಪ್ರವೀಣ್ ಹಾಗೂ ಸುನಿಲ್ ಭಾಗವಹಿಸಿದ್ದರು.