*ಗೋಣಿಕೊಪ್ಪ, ಜೂ. ೨೩: ವೀರಾಜಪೇಟೆ ತಾಲೂಕು ಸಂಜೀವಿನಿ ಒಕ್ಕೂಟದ ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಾಗಿ ಕುಸುಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸ್ವರೂಪ್ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದೆ.

ತಾಲೂಕು ವ್ಯಾಪ್ತಿಯ ೩೯ ಸದಸ್ಯರನ್ನೊಳಗೊಂಡAತೆ ಸಭೆ ನಡೆಸಿ ೧೩ ಜನರನ್ನು ತಾಲೂಕು ಒಕ್ಕೂಟಕ್ಕೆ ಆಯ್ಕೆ ಮಾಡಲಾಗಿದೆ. ಇದರಂತೆ ಪೊನ್ನಂಪೇಟೆ ವ್ಯಾಪ್ತಿಯ ಶೋಭ ಅವರನ್ನು ಉಪಾಧ್ಯಕ್ಷರಾಗಿಯೂ, ಹುದಿಕೇರಿ ಗ್ರಾಮದ ಸೀತಮ್ಮ ಅವರನ್ನು ಸಹ ಕಾರ್ಯದರ್ಶಿ ಮತ್ತು ಹೊಸೂರು ಗ್ರಾಮದ ವಾರಿಜ ಅವರನ್ನು ಖಜಾಂಜಿಯಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ವ್ಯವಸ್ಥಾಪಕ ಕುಮಾರ್, ಚಾಂದಿನಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್, ತಾಲೂಕು ವಲಯ ಮೇಲ್ವಿಚಾರಕ ಸೋಮಶೇಖರ್, ಕೆ.ಆರ್. ಆಶಾ, ದೇವಮ್ಮ, ಟಿ.ಎನ್. ಸಾವಿತ್ರಿ, ಗೌರಮ್ಮ ಎಂ.ಎA., ವರಲಕ್ಷಿö್ಮ ಹಾಜರಿದ್ದರು.