ಮಡಿಕೇರಿ, ಮೇ ೨೬: ನಗರದ ದೇಚೂರು ಶ್ರೀ ರಾಮ ವಿದ್ಯಾಗಣಪತಿ ದೇವಾಲಯದ ೨೪ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. ೨೭ರಂದು (ಇಂದು) ನಡೆಯಲಿದೆ. ಹೆಚ್.ಆರ್. ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಬೆಳಿಗ್ಗೆ ೮.೩೦ಕ್ಕೆ ನಿರ್ಮಾಲ್ಯ, ಪುಣ್ಯಾಹ ವಾಚನ, ೯ಕ್ಕೆ ದೇವತಾ ಪ್ರಾರ್ಥನೆ, ೯.೩೦ಕ್ಕೆ ಮಹಾಗಣಪತಿ ಮೂರ್ತಿಗೆ ಅಭಿಷೇಕ, ೧೦ಕ್ಕೆ ಬಯಲು ಆಂಜನೇಯ ಪೂಜೆ, ೧೦.೩೦ಕ್ಕೆ ಅಷ್ಟದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಪೂಜೆ, ೧೧.೧೫ಕ್ಕೆ ನವಗ್ರಹ ಹಾಗೂ ನಾಗಪೂಜೆ, ೧೨.೩೦ಕ್ಕೆ ಮಹಾಪೂಜೆ, ಮಂಗಳಾರತಿ ಬಳಿಕ ೧ ಗಂಟೆಯಿAದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.