ಸಿದ್ದಾಪುರ, ಮೇ ೨೬: ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬAದ ಹಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ಕಾವಿಟ್ಟು ಮರಿಮಾಡಿ ಉರಗ ರಕ್ಷಕರು ಅರಣ್ಯಕ್ಕೆ ಬಿಟ್ಟಿದ್ದಾರೆ. ಇತ್ತೀಚೆಗೆ ಕೈಕೇರಿ ಗ್ರಾಮದ ನಿರ್ಮಾಣ ಹಂತದ ಮನೆಯೊಂದರಲ್ಲಿ ಹದಿನೈದು ಹಾವಿನ ಮೊಟ್ಟೆಗಳು ಕಂಡು ಬಂದಿದ್ದವು.
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಉರಗ ರಕ್ಷಕರಾದ ರಾಕಿ ನವೀನ್ ಹಾಗೂ ಮನೋಜ್ ಮೊಟ್ಟೆಗಳನ್ನು ರಕ್ಷಣೆ ಮಾಡಿ ಬಾಟಲಿಯಲ್ಲಿ ಎಪ್ಪತ್ತು ದಿನಗಳ ಕಾಲ ಕಾವಿಟ್ಟು ಹದಿನೈದು ನಾಗರಹಾವಿನ ಮರಿಗಳನ್ನು ಆರೈಕೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಪೊನ್ನಂಪೇಟೆಯ ಕಾಲೇಜೊಂದರ ಸಮೀಪ ಕೇರೆ ಹಾವಿನ ೨೪ ಮೊಟ್ಟೆಗಳನ್ನು ರಕ್ಷಣೆ ಮಾಡಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು.