ಮಡಿಕೇರಿ, ಏ. ೧೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಈಗಾಗಲೇ ೧ನೇ ತರಗತಿಯ ಮಕ್ಕಳಿಗೆ ಕೊಡವ ಪಾಟ ಪಡಿಪು-೧ ಪುಸ್ತಕ ತಯಾರಾಗಿ ಹಲವಾರು ಶಾಲೆಗಳಲ್ಲಿ ಭೋದನೆಯಾಗುತ್ತಿದೆ. ಹಾಗೆಯೇ ಇದೀಗ ೨ನೇ ತರಗತಿಯ ಮಕ್ಕಳಿಗೆ ಕೊಡವ ಪಾಠ ಪಡಿಪು-೨ ಪುಸ್ತಕವು ತಯಾರಾಗುತ್ತಿದೆ. ತಾ. ೧ ಮತ್ತು ತಾ. ೧೨ ರಂದು ಸಭೆ ನಡೆಸಿ, ಈ ಪಾಠ ಪಡಿಪು-೨ ಪುಸ್ತಕ ತಯಾರಿಸಲಾಗಿದೆ. ಈ ಪುಸ್ತಕ ತಯಾರಿಸಲು ನುರಿತ ತಜ್ಞರುಗಳ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ (ಅಧ್ಯಕ್ಷರು), ಬಾಚರಣಿಯಂಡ ರಾಣು ಅಪ್ಪಣ್ಣ (ಸಂಚಾಲಕಿ), ಬಾಚರಣಿಯಂಡ ಪಿ. ಅಪ್ಪಣ್ಣ, ಮುಲ್ಲೇಂಗಡ ಮಧೋಶ್ ಪೂವಯ್ಯ, ಕಾಳಿಮಾಡ ಮೋಟಯ್ಯ, ನಾಗೇಶ್ ಕಾಲೂರು, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಧರ್ಮಶೀಲ ಎ.ಎಂ., ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಗೂ ಮಾಚಿಮಾಡ ಜಾನಕಿ ಮಾಚಯ್ಯ ಇತರರು ಇದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.