ಮಡಿಕೇರಿ, ಮಾ. ೨೪: ನಗರದ ವಿಜಯ ಬ್ಯಾಂಕ್ ಹತ್ತಿರ ಭಿಕ್ಷಾಟನೆ ಮಾಡುತಿದ್ದ ಹಿರಿಯ ನಾಗರಿಕ ರೊಬ್ಬರನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್. ಸುಬ್ರಮಣ್ಯ ಅವರು ಗಮನಿಸಿ ಹಿರಿಯ ನಾಗರಿಕರ ಸಹಾಯವಾಣಿ ೧೪೫೬೭ಗೆ ಕರೆ ಮಾಡಿ, ಮಾಹಿತಿ ನೀಡಿ, ನಗರದ ಶಕ್ತಿ ವೃದ್ಧಾ ಶ್ರಮಕ್ಕೆ ಸೇರಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಪೊಲೀಸ್ ಇಲಾಖೆಯವರ ಸಹಕಾರ ದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಲಾಯಿತು.
 
						