ಕೂಡಿಗೆ, ಜ. ೩೧: ಹಾರಂಗಿ ಜಲಾಶಯದ ಮುಖ್ಯ ವಿಭಾಗದ ಕಚೇರಿಯನ್ನು ಕುಶಾಲನಗರದಿಂದ ಹಾರಂಗಿ ಜಲಾಶಯನದ ಸಮೀಪಕ್ಕೆ ಸ್ಥಳಾಂತರಿಸುವAತೆ ಮಂತ್ರಿಗಳಿಗೆ ಹಾಗೂ ವಿವಿಧ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಕೂಡಿಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು. ಅದರನ್ವವಯ ಗ್ರಾಮ ಪಂಚಾಯಿತಿ ವತಿಯಿಂದ ಮುಖ್ಯಮಂತ್ರಿಯವರಿಗೆ, ಜಲ ಸಂಪನ್ಮೂಲ ಸಚಿವರಿಗೆ, ರಾಜ್ಯ ಮಟ್ಟದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಯನ್ನು ಕಳುಹಿಸಲಾಗಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಜಲಾಶಯವಿದ್ದು, ಹಾರಂಗಿಯಲ್ಲಿ ಈ ಹಿಂದೆ ಹಾರಂಗಿ ಜಲಾನಯನದ ಆವರಣದಲ್ಲಿ ಎರಡು ಮುಖ್ಯ ವಿಭಾಗ, ಮತ್ತು ಒಂದು ಉಪ ವಿಭಾಗ ಕಾರ್ಯನಿರ್ವಹಿಸುತ್ತಿತು. ಆದರೆ ಹಲವು ವರ್ಷಗಳ ಹಿಂದೆ ಒಂದು ಮುಖ್ಯ ವಿಭಾಗವನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಹಿಸಿ ಬೆಳಗಾವಿಗೆ ಸ್ಥಳಾಂತರಿಸಲಾಯಿತು. ಮತ್ತೊಂದು ಮುಖ್ಯ ವಿಭಾಗವನ್ನು ಜಲಾಶಯದಿಂದ ೧೦ ಕಿಲೋ ಮೀಟರ್ ದೂರದ ಕುಶಾಲನಗರಕ್ಕೆ ಸ್ಥಳಾಂತರಿಸಲಾಯಿತು. ಆದರೆ ರಾಜ್ಯದ ವಿವಿಧೆಡೆ ಇರುವ ಎಲ್ಲಾ ಜಲಾಶಯಗಳಲ್ಲಿ ಇಲಾಖೆಯ ಮುಖ್ಯ ಕಚೇರಿಗಳು ಅಣೆಕಟ್ಟೆಯ ಮುಖ್ಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆದರೆ, ಹಾರಂಗಿಯಲ್ಲಿ ಇರಬೇಕಾದ ಮುಖ್ಯ ವಿಭಾಗ ಮತ್ತು ಉಪ ವಿಭಾಗ ಕಚೇರಿಗಳು ಹಾರಂಗಿಯಿAದ ಕುಶಾಲನಗರಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ.

ಹಾರಂಗಿಯಲ್ಲಿ ಮೊದಲು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಕಚೇರಿಯ ಕಟ್ಟಡಗಳ ಪಾಳುಬಿದ್ದಿವೆ. ಇದರ ಜೊತೆಯಲ್ಲಿ ಹಾರಂಗಿಯಲ್ಲಿ ಜಲಾಶಯಕ್ಕೆ ಸಂಬAಧಿಸಿದ ವಸತಿ ಗೃಹಗಳು ಸಹ ಇವೆ. ಇವುಗಳಲ್ಲಿ ಬೇರೆ ಇಲಾಖೆ ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಕುಶಾಲನಗರದಲ್ಲಿರುವ ಎಲ್ಲಾ ಕಚೇರಿಗಳನ್ನು ಹಾರಂಗಿಗೆ ಸ್ಥಳಾಂತರ ಮಾಡುವಂತೆ ಮನವಿಯ ಮೂಲಕ ಒತ್ತಾಯಿಸಲಾಗಿದೆ.