ದೂರು ದಾಖಲು
ಕಣಿವೆ, ಜ. ೨೯ : ಶಾಲಾ ವಾಹನಕ್ಕೆ ಮಕ್ಕಳನ್ನು ಬಿಟ್ಟು ಮನೆಗೆ ಮರಳುತ್ತಿದ್ದ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಸ್ಥಳೀಯ ವ್ಯಕ್ತಿಯೊಬ್ಬ ಯತ್ನಿಸಿದ ಘಟನೆ ಶನಿವಾರ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ತನ್ನ ಮಕ್ಕಳನ್ನು ಶಾಲಾ ಬಸ್ಗೆ ಹತ್ತಿಸಿ ಮನೆಗೆ ಮರಳುವಾಗ ನನ್ನ ಹೆಂಡತಿ ನಿಮ್ಮನ್ನು ಕರೆಯುತ್ತಿದ್ದಾಳೆ ಎಂದು ಮನೆಗೆ ಕರೆದ ಸ್ಥಳೀಯ ನಿವಾಸಿ ಮೊಯ್ದು (೫೦) ಎಂಬಾತ ಆ ಸಂತ್ರಸ್ತೆಯ ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದು, ಒಂದೇ ಸಮನೆ ಜೋರು ದನಿಯಲ್ಲಿ ಕಿರುಚಿಕೊಂಡ ಆ ಮಹಿಳೆ ಆತನಿಂದ ತಪ್ಪಿಸಿಕೊಂಡು ಓಡಿ ಬಂದು ತನ್ನ ಗಂಡನಿಗೆ ಮಾಹಿತಿ ನೀಡಿ ಕುಶಾಲನಗರ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರನ್ನು ಸ್ವೀಕರಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಮಾನಭಂಗ ಯತ್ನ ಆರೋಪದಡಿ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೊಯ್ದು ತಲೆಮರೆಸಿಕೊಂಡಿದ್ದಾನೆ.