ಮಡಿಕೇರಿ, ಜ.೨೯: ಜಿಲ್ಲೆಯಲ್ಲಿ ಶನಿವಾರ ೫೪೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೩೬, ವೀರಾಜಪೇಟೆ ತಾಲೂಕಿನಲ್ಲಿ ೧೬೭, ಸೋಮವಾರಪೇಟೆ ತಾಲೂಕಿನಲ್ಲಿ ೨೩೭ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೪೩,೨೪೪ ಆಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೭೮೫ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು ೩೮,೯೩೪ ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು ೪೪೨ ಮರಣ ಪ್ರಕರಣಗಳು ವರದಿಯಾಗಿವೆೆ. ೩೮೭೦ ಸಕ್ರಿಯ ಪ್ರಕರಣಗಳಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೦೧ ಸಾವು ಉಂಟಾಗಿದ್ದು, ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೨೭೦ ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.೧೬.೦೪ ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ. ಮತ್ತೆ ಶೀಲಾ ಡಿಸೋಜ ಅವರು ಬಸ್ ನಿಲ್ದಾಣದ ವಿಷಯ ಪ್ರಸ್ತಾಪಿಸಿದರು. ಈ ಹಿಂದೆ ಇಂದಿರಾಗಾAಧಿ ಅಭಿಮಾನಿಗಳ ಸಂಘದಿAದ ನಿಲ್ದಾಣ ನಿರ್ಮಾಣಗೊಂಡಿತ್ತು. ೧೯೯೨ರಲ್ಲಿ ಪಂಚಾಯಿತಿಯಿAದಲೇ ಅನುಮತಿ ನೀಡಲಾಗಿದೆ. ಇದೀಗ ನೂತನ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಇದರಲ್ಲಿ ಮೂಲ ನಿರ್ಮಾಣ ಇಂದಿರಾಗಾAಧಿ ಅಭಿಮಾನಿಗಳ ಸಂಘ ಎಂದು ಬರೆಯುವಂತೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರೊಂದಿಗೆ ಬಸ್ ನಿಲ್ದಾಣದ ಉದ್ಘಾಟನಾ ಫಲಕದಲ್ಲಿ ಪಂಚಾಯಿತಿ ಸದಸ್ಯರ ಹೆಸರು ಹಾಕಿಲ್ಲ. ಸದಸ್ಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉಪಾಧ್ಯಕ್ಷ ಸಂಜೀವ, ವೆಂಕಟೇಶ್, ಶುಭಕರ್ ಅವರುಗಳೂ ದನಿಗೂಡಿಸಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ನಾಮನಿರ್ದೇಶನ ಸದಸ್ಯ ಎಸ್.ಆರ್. ಸೋಮೇಶ್, ಪಂಚಾಯಿತಿಯಿAದ ಯಾವುದೇ ಅನುದಾನ ಪಡೆದಿಲ್ಲ. ಹಾಗಾಗಿ ಹೆಸರು ಹಾಕಿಲ್ಲ. ಈ ಹಿಂದೆ ಇದ್ದ ಕಟ್ಟಡದ ಸಾಮಗ್ರಿಗಳನ್ನು ಸಂಘದ ಅಧ್ಯಕ್ಷರೇ ತೆಗೆದುಕೊಂಡು ಹೋಗಿದ್ದಾರೆ. ಅಷ್ಟೂ ಅಲ್ಲದೇ ಸಂಘ ಸಂಸ್ಥೆಗಳ ವತಿಯಿಂದ ನಿರ್ಮಿಸಿರುವ ಹಲವಷ್ಟು ಪ್ರತಿಮೆ, ಜೇಸೀ ವೇದಿಕೆಯಲ್ಲೂ ಪಂಚಾಯಿತಿ ಸದಸ್ಯರುಗಳ ಹೆಸರಿಲ್ಲ ಎಂದರು.

ಈ ಸಂದರ್ಭ ಸಭೆಯಲ್ಲಿ ಸದಸ್ಯರುಗಳ ನಡುವೆ ವಾಕ್ಸಮರ ನಡೆಯಿತು. ಅನುದಾನ ನೀಡದಿದ್ದರೂ ಬಸ್ ನಿಲ್ದಾಣ ನಿರ್ಮಾಣ ಗೊಂಡಿರುವುದು ಪಂಚಾಯಿತಿಗೆ ಸೇರಿದ ಜಾಗದಲ್ಲಿ. ಅದೂ ಅಲ್ಲದೆ ನಾಮನಿರ್ದೇಶಿತ ಸದಸ್ಯ ಸೋಮೇಶ್ ಅವರ ಹೆಸರನ್ನು ಪಟ್ಟಣ ಪಂಚಾಯಿತಿ ಸದಸ್ಯ ಎಂದು ಫಲಕದಲ್ಲಿ ಹಾಕಲಾಗಿದೆ ಎಂದು ಶೀಲಾ ಡಿಸೋಜ ಆಕ್ಷೇಪಿಸಿದರು.

ನಾಮನಿರ್ದೇಶಿತ ಸದಸ್ಯ ಸೋಮೇಶ್ ಅವರು ಪಂಚಾಯಿತಿ ಅಧ್ಯಕ್ಷರನ್ನೂ ಒಳಗೊಂಡAತೆ ಎಲ್ಲಾ ಸದಸ್ಯರಿಗೂ ತಪ್ಪುಮಾಹಿತಿ ನೀಡಿ, ಸದಸ್ಯರ ದಾರಿ ತಪ್ಪಿಸಿದ್ದಾರೆ ಎಂದು ಸಂಜೀವ ಆರೋಪಿಸಿದರು. ಬಸ್ ನಿಲ್ದಾಣಕ್ಕೆ ಇಂದಿರಾಗಾAಧಿ ಅವರ ಹೆಸರನ್ನು ಹಾಕಲಾಗುವುದು ಎಂದು ಅಂತಿಮ ಕ್ಷಣದವರೆಗೂ ಹೇಳುತ್ತಿದ್ದ ಸೋಮೇಶ್ ಅವರು, ನಂತರ ನಮ್ಮ ಕಿವಿಗೆ ಹೂವು ಇಟ್ಟಿದ್ದಾರೆ. ಬಸ್ ನಿಲ್ದಾಣಕ್ಕೆ ಇಂದಿರಾಗಾAಧಿ ಹೆಸರು ಹಾಕಲೇಬೇಕು. ಮಾಜಿ ಪ್ರಧಾನಿಗೆ ಅವಮಾನವಾಗಲು ಬಿಡುವುದಿಲ್ಲ. ಬಸ್ ನಿಲ್ದಾಣದ ಗೊಂದಲ ಬಗೆಹರಿಯದ ಹೊರತು ಮುಂದಿನ ಸಭೆಗಳಿಗೆ ಬರುವುದಿಲ್ಲ ಎಂದು ಶೀಲಾ ಡಿಸೋಜ ಹೇಳಿದರು.

ಬಸ್ ನಿಲ್ದಾಣದ ಫಲಕದಲ್ಲಿ ಸದಸ್ಯರ ಹೆಸರು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಸಮಾಧಾನ ಪಡಿಸಲು ಯತ್ನಿಸಿದರು. ಈ ಬಗ್ಗೆ ಏರುದನಿಯಲ್ಲಿ ಚರ್ಚೆಯಾಗುತ್ತಿದ್ದ ಸಂದರ್ಭವೇ ಶಾಸಕರು ಸಭೆಯಿಂದ ಎದ್ದು ಬಂದರು. ಆ ನಂತರವೂ ಸದಸ್ಯರ ನಡುವೆ ವಾಕ್ಸಮರ ಮುಂದುವರೆಯಿತು. ಅಂತಿಮವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ಸಭೆ ವಿಫಲವಾಯಿತು.