ನಾಪೋಕ್ಲು, ಜ. ೨೯: ರಾಜ್ಯ ಸರಕಾರವು ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೀಕರಣ ಗೊಳಿಸುವ ನಿಟ್ಟಿನಲ್ಲಿ ಇಂದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಗ್ರಾಮೀಣ ಸೌಧವನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯನವರು ಹೇಳಿದರು. ಅವರು ಎಮ್ಮೆಮಾಡು ಗ್ರಾಮ ಪಂಚಾಯಿತಿ ನೂತನ ಸೌಧವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ನೂತನ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗಿದ್ದು ಜನರು ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಕೋರಿದರು.

ವೆಬ್‌ಸೈಟ್‌ಗೆ ಹೋದರೆ ಸುಮಾರು ೭ ಕೋಟಿ ಪುಸ್ತಕದ ಬಂಡಾರವೇ ಸಿಗಲಿದೆ. ಇದರಲ್ಲಿ ಐ.ಎ.ಎಸ್. ಐ.ಪಿ.ಎಸ್. ಪರೀಕ್ಷೆ ಬರೆಯಲು ಸಹಾಯವಾಗುವ ಪುಸ್ತಕಗಳು ಸಹ ದೊರೆಯಲಿದೆ ಎಂದರು. ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಇಸ್ಮಾಯಿಲ್ ಅವರು ಶಾಸಕರ ಗಮನ ಸೆಳೆದಾಗ ಸಂಬAಧಪಟ್ಟ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬೋಪಯ್ಯ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ ಇಂದು ಜಿಲ್ಲೆಯಲ್ಲಿ ಬಹುತೇಕ ಕಡೆ ಮಹಿಳೆಯರೇ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವುದು ಸಂತೋಷ ತಂದಿದೆ. ಕೊಡಗಿನ ಸಮಸ್ಯೆಗೆ ಶಾಸಕರು ಮತ್ತು ನಾವು ಪಕ್ಷ ಬೇಧವನ್ನು ಮರೆತು ಒಂದಾಗಿ ಕೈಜೋಡಿಸುತ್ತೇವೆ ಎಂದ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಇರುವುದರಿಂದ ಜಿಲ್ಲೆಯು ಅಭಿವೃದ್ಧಿಯಾಗುತ್ತಿದೆ ಎಂದರು. ಈ ಸೌಧ ನಿರ್ಮಾಣಕ್ಕೆ ಜಾಗವನ್ನು ದಾನ ಮಾಡಿದ ಚೆಂಬಾರAಡ ಆಲಿಯವರ ಕಾರ್ಯವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಚಕ್ಕೆರ ಇಸ್ಮಾಯಿಲ್, ತೀರಿಕೆ ಕಾಡು ಯುಸೂಫ್, ಚಂಬಾರAಡ ಐಷಮ್ಮ, ಕನ್ನಡಿಯಂಡ ಮಹೀನ್, ಕಂಬೇರ ಅಫ್ಸತ್, ಪಳಂಗೋಟು ಗಪೂರ್, ಸ್ಥಳ ದಾನಿಗಳಾದ ಚಂಬಾರAಡ ಆಲಿ ಮತ್ತು ಕುಟುಂಬಸ್ಥರು, ಚಂಬಾರAಡ ಮಹೀನೆ, ಕಕ್ಕಬ್ಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಕಲಿಯಂಡ ಸಂಪನ್ನ ಅಯ್ಯಪ್ಪ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಖಾದರ್ ಹಾಜಿ, ಹಿರಿಯರಾದ ಕಾಳೆಯ ಖದರ್ ಹಾಜಿ, ಪಡಿಯಾಣಿ ಜಮಅತ್ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಇನ್ನಿತರರು ಇದ್ದರು.

ಈ ಸಂದರ್ಭ ಮಡಿಕೇರಿ ತಾ, ಕಾರ್ಯನಿರ್ವಹಣಾಧಿಕಾರಿ ಶೇಖರ್ ಸ್ವಾಗತಿಸಿದ ಕಾರ್ಯಕ್ರಮವನ್ನು ಜಿಲ್ಲಾ ಉಪಕಾರ್ಯದರ್ಶಿ ಪಿ.ಲಕ್ಷಿö್ಮ ಚಂದ್ರಶೇಖರ್ ನಿರೂಪಿಸಿದರು. ಶಿಕ್ಷಕಿ ರಮ್ಯ ನಾಡ ಗೀತೆ ಹಾಡಿದರು; ಪಿ.ಡಿ.ಓ. ಚೋಂದಕ್ಕಿ ವಂದಿಸಿದರು.