ಮಡಿಕೇರಿ, ಜ. ೨೮: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ ೨೦೧೧ರ ಕಲಂ ೨೫ರನ್ವಯ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ‘ಎ’ ಪ್ರವರ್ಗದ ೩೯ ಅಧಿಸೂಚಿತ ಸಂಸ್ಥೆಗಳು, ದೇವಾಲಯಗಳಿಗೆ ೯ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಬೇಕಾಗಿದ್ದು, ಈ ಬಗ್ಗೆ ಆಸಕ್ತ ಭಕ್ತಾದಿಗಳು, ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಈ ಕಚೇರಿಯಿಂದ ತಾ. ೧೭.೦೧.೨೦೨೨ ರಂದು ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ ದಿನಾಂಕ: ೧೭.೦೧.೨೦೨೨ ರಂದು ಹೊರಡಿಸಲಾಗಿರುವ ಪ್ರಕಟಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.