ಮಡಿಕೇರಿ, ಜ. ೨೮: ಸ್ವತಂತ್ರ ಭಾರತದ ಪ್ರಪ್ರಥಮ ಸೇನಾ ಮಹಾದಂಡನಾಯಕ ಭಾರತೀಯ ಸೇನೆಯ ಪಿತಾಮಹ ಎನಿಸಿಕೊಂಡಿರುವ ಕೊಡಗಿನ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಇಂದು ಅವರ ೧೨೩ನೆಯ ಜನ್ಮದಿನದ ಅಂಗವಾಗಿ ಭಾವಪೂರ್ಣ ನಮನ ಸಲ್ಲಿಸಲಾಯಿತು. ಕೋವಿಡ್ ಕಾರಣದಿಂದಾಗಿ ಈ ಬಾರಿ ಸರಳತೆಯ ಕಾರ್ಯಕ್ರಮ ಜರುಗಿದರೂ ವೀರಸೇನಾನಿಯ ಸ್ಮರಣೆಯೊಂದಿಗೆ ಪುಷ್ಪನಮನ ಭಜನೆಯಂತಹ ಕಾರ್ಯಕ್ರಮಗಳ ಮೂಲಕ ಗೌರವ ಅರ್ಪಿಸಲಾಯಿತು.
ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿನ ಕಾರ್ಯಪ್ಪ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಯಪ್ಪ ಅವರ ಸಮಾಧಿ ಇರುವ ಸ್ಥಳವಾದ ರೋಶನಾರದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿರುವ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಇರುವ ಸ್ಥಳದಲ್ಲಿ ಕಾವೇರಿ ಕಾಲೇಜು, ಎನ್ಸಿಸಿ ಸೇರಿದಂತೆ ಕಾರ್ಯಪ್ಪ ಅಭಿಮಾನಿಗಳು, ಮಾಜಿ ಯೋಧರು, ಕಾರ್ಯಪ್ಪ ಅವರ ಹುಟ್ಟೂರಾದ ಶನಿವಾರಸಂತೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ವಿಶ್ವಖ್ಯಾತಿಯ ಸೇನಾ ನಾಯಕರಿಗೆ ಗೌರವ ಸೂಚಿಸಲಾಯಿತು.
ಮಡಿಕೇರಿಯಲ್ಲಿ: ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿರುವ ಪ್ರತಿಮೆ ಸ್ಥಳದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ, ಸಿಇಓ ಭಂವರ್ಸಿAಗ್ ಮೀನಾ, ಎಸ್ಪಿ ಕ್ಷಮಾಮಿಶ್ರಾ, ಉಪವಿಭಾಗಾಧಿಕಾರಿ ಈಶ್ವರ್ಕುಮಾರ್ ಖಂಡೂ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಕಾರ್ಯಪ್ಪ ಅವರ ಪುತ್ರ ಏರ್ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ
(ಮೊದಲ ಪುಟದಿಂದ) ಮೇಜರ್ ಬಿದ್ದಂಡ ನಂದಾ ನಂಜಪ್ಪ, ಕಾರ್ಯದರ್ಶಿ ಉಳ್ಳಿಯಡ ಪೂವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಕೆ.ಟಿ. ದರ್ಶನ್ ಸೇರಿದಂತೆ ನಿವೃತ್ತ ಯೋಧರು ಮತ್ತಿತರರು ಪಾಲ್ಗೊಂಡು ಪುಷ್ಪ ಗುಚ್ಚವಿರಿಸಿ ಗೌರವ ಸಲ್ಲಿಸಿದರು. ಈ ಬಾರಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿರಲಿಲ್ಲ. ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಶಿಸ್ತಿನ ಸಿಪಾಯಿ ಆಗಿದ್ದರು, ಕಾರ್ಯಪ್ಪ ಅವರ ಶಿಸ್ತು, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ. ಸ್ವಾತಂತ್ರö್ಯ ಭಾರತದ ಮಹಾ ದಂಡನಾಯಕರಾಗಿ ರಾಷ್ಟç ರಕ್ಷಣೆ ಹಾಗೂ ಭದ್ರತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಮಹತ್ತರ ಸಾಧನೆ ಮಾಡಿದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೊಡಗು ಜಿಲ್ಲೆಯ ಸುಪುತ್ರರಾಗಿ ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಜಿಲ್ಲೆಗೆ ಹೆಸರು ತಂದು ಕೊಟ್ಟಿದ್ದಾರೆ ಎಂದು ಕೆ.ಜಿ.ಬೋಪಯ್ಯ ಸ್ಮರಿಸಿದರು.
ರೋಶನಾರದಲ್ಲಿ
ಕಾರ್ಯಪ್ಪ ಅವರ ಸಮಾಧಿ ಇರುವ ಸ್ಥಳವಾದ ರೋಶನಾರದಲ್ಲಿ ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಏರ್ ಮಾರ್ಷಲ್ ಕಾರ್ಯಪ್ಪ, ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಮತ್ತಿತರರು ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ಭಜನೆ ನಡೆಯಿತು.
ದೇವರ ಕುರಿತಾದ ಕರ್ತವ್ಯ, ದೇಶಕ್ಕೆ ಸಲ್ಲಿಸಬೇಕಾದ ಸೇವೆ ಮತ್ತು ಕುಟುಂಬದ ಬಗ್ಗೆ ಗಮನ. ಅವರ ಪ್ರಕಾರ ತನ್ನ ರಕ್ತದಲ್ಲಿ ರಕ್ತನಾಳದಲ್ಲಿ ಹರಿಯುತ್ತಿರುವ ನೆತ್ತರಿನ ಬಣ್ಣ ಇತರರಲ್ಲಿದ್ದಂತೆಯೇ ಆಗಿದ್ದು, ಇದಕ್ಕೂ ಧರ್ಮಕ್ಕೂ ಸಂಬAಧವಿಲ್ಲ. ಸೇನೆಯಲ್ಲಿ ಜಾತಿ, ಬಣ್ಣ, ಧರ್ಮಗಳೆಲ್ಲ ಗೌಣವಾದದ್ದು, ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಇಂತಹ ಮನೋಭಾವ ಬದಲಾವಣೆಯಾಗುತ್ತಿರುವುದು ವಿಷಾದಕರ. ಧಾರ್ಮಿಕ ಹಿನ್ನೆಲೆ ಇರಿಸಿಕೊಂಡು ಅನೇಕ ಅಡ್ಡಗೋಡೆಗಳು ನಿರ್ಮಾಣವಾಗುತ್ತಿವೆ. ನಾವು ಭಾರತೀಯರು ಎಂಬ ಏಕಮಾತ್ರ ಭಾವನೆ ಇರಿಸಿಕೊಂಡು ಇತರ ಎಲ್ಲಾ ಧರ್ಮಗಳಿಗೆ ನಂಬಿಕೆಗಳಿಗೆ ಗೌರವ ಸಲ್ಲಿಸಬೇಕು. ದೇಶದಲ್ಲಿ ಈಗ ಸೇನೆಯಲ್ಲಿ ದುಡಿಯುವುದೇ ಉತ್ತಮ ಉದ್ಯೋಗವಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿ ಎಂದು ಆಶಿಸುತ್ತೇನೆ ಎಂದರು.ನಾಪೋಕ್ಲು: ಶಿಸ್ತು, ಸಮಯ ಪ್ರಜ್ಞೆ, ಶೌರ್ಯ, ಸಾಹಸಕ್ಕೆ ಮತ್ತೊಂದು ಹೆಸರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ. ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೧೨೩ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಪ್ಪ ಅವರ ಜನ್ಮ ದಿನದಂದೇ ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಲಾಗಿರುವದು ಸಂತಸ ತಂದಿದೆ. ಕೊಡಂದೇರ ಕುಟುಂಬ ಹಿಂದೆ ನಾಲ್ಕುನಾಡಿನ ನೆಲಜಿ ಗ್ರಾಮದಲ್ಲಿ ವಾಸವಿದ್ದ ಬಗ್ಗೆ ಬ್ರಿಟಿಷ್ ಅಧಿಕಾರಿ ರೆಕ್ಟರ್ ಬರೆದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ನಾಪೋಕ್ಲುವಿನಲ್ಲಿ ಸ್ಥಾಪಿಸಲು ನಿರ್ಧಾರ ಮಾಡಿರುವದಕ್ಕೆ ಹೆಚ್ಚಿನ ಮಹತ್ವ ದೊರೆತಿದೆ ಎಂದರು.
ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ನಿವೃತ್ತ ಡಿಸಿಪಿ ಬಿದ್ದಾಟಂಡ ಮುತ್ತಣ್ಣ ಮಾತನಾಡಿ, ಎಲ್ಲರೂ ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು. ಇತಿಹಾಸದಲ್ಲಿ ಅಡಗಿರುವ ಮಹಾನ್ ವ್ಯಕ್ತಿಗಳ ಶೌರ್ಯ ಸಾಹಸವನ್ನು ಅರಿಯಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಶೈಲಿಯನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟಿರ ಮಾಚಯ್ಯ, ಕೊಡವ ಸಮಾಜ ನಡೆದುಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಸದಸ್ಯರಾದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ನಿವೃತ್ತ ನಬಾರ್ಡ್ ಅಧಿಕಾರಿ ಮುಂಡAಡ ಸಿ.ನಾಣಯ್ಯ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ ಇದ್ದರು. ಚೌರೀರ ಉದಯ ಪ್ರಾರ್ಥನೆ, ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತ, ಸಹ ಕಾರ್ಯದರ್ಶಿ ಮಾಚೆಟ್ಟಿರ ಕುಶು ಕುಶಾಲಪ್ಪ ವಂದಿಸಿದರು.ರೆಜಿಮೆAಟ್ ಸೈನಿಕರಾದ ಕಿರಿಯಮಾಡ ಮಿಲನ್ ಗಣಪತಿ ಮಾತನಾಡಿ ಈ ದೇಶಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನವರ ಕೊಡುಗೆ ಅಪಾರವಾಗಿದೆ,ಇಂದು ನಾವೆಲ್ಲರೂ ನೆಮ್ಮದಿಯ ಬದುಕು ಕಾಣಲು ಸೇನೆಯಲ್ಲಿ ಮಾಡಿದ ಇವರ ಸೇವೆ ಪ್ರಮುಖ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣುವಂಡ.ಎಸ್.ಮಾದಯ್ಯ ಮಾತನಾಡಿದರು. ಎನ್.ಸಿ.ಸಿ.ಕೆಡೆಟ್ಗಳು, ಎನ್.ಎಸ್.ಎಸ್.ವಿದ್ಯಾರ್ಥಿಗಳು, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಈ ವೇಳೆ ಪ್ರಸ್ತುತ ಪಡಿಸಿ,ಗೌರವ ಸಲ್ಲಿಸಿದರು. ಐ ಕ್ಯೂ ಎಸ್ ಸಂಚಾಲಕಿ ಪ್ರೊ.ಎಂ.ಎಸ್.ಭಾರತಿ, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್.ಅಕ್ರA,ಲೆಫ್ಟಿನೆAಟ್ ಐ.ಡಿ.ಲೇಪಾಕ್ಷಿ, ಎನ್.ಎಸ್.ಎಸ್.ಅಧಿಕಾರಿಗಳಾದ ಎಂ.ಎನ್. ವನಿತ್ಕುಮಾರ್, ಎನ್.ಪಿ.ರೀಟಾ, ಕಾಲೇಜಿನ ಅಧ್ಯಾಪಕರ ವೃಂದ ಭಾಗವಹಿಸಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನವರ ಪುತ್ಥಳಿಗೆ ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಲಾಯಿತು.ಮಡಿಕೇರಿ: ನಿರ್ದಿಷ್ಟ ಗುರಿ ಹಾಗೂ ಅದರೆಡೆಗಿನ ಕಠಿಣ ಪ್ರರಿಶ್ರಮದಿಂದ ಮಾತ್ರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಕ್ಯಾಪ್ಟನ್ ರಾಹುಲ್ ಸೋಮಣ್ಣ ಅವರು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೧೨೩ನೇ ಜನ್ಮದಿನಾಚರಣೆಯನ್ನು ಪುಷ್ಪಾರ್ಚನೆ ಮೂಲಕ ನೆರವೇರಿಸಿ ಮಾತನಾಡಿದ ಅವರು, ಶಿಸ್ತು, ಬದ್ಧತೆ ಹಾಗೂ ನಿರಂತರ ಪ್ರಯತ್ನದಿಂದ ನಾವು ಉದ್ದೇಶಿಸಿದ ಗುರಿಯನ್ನು ತಲುಪಲು ಸಾಧ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮ ಗುರಿಯನ್ನು ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಶಿಸ್ತು, ಕಠಿಣ ಪರಿಶ್ರಮವನ್ನು ಅವರ ಜೀವನಗಾಥೆಯಿಂದ ಅರಿತುಕೊಂಡು, ಆ ಮೌಲ್ಯಗಳನ್ನು ತಾವೂ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನವನ್ನಲಂಕರಿಸಿ ಶನಿವಾರಸಂತೆ: ಭಾರತದ ರಕ್ಷಣಾ ವಿಭಾಗಗಳ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಜನರಲ್ ಕೆ.ಎಂ. ಕಾರ್ಯಪ್ಪ ಅವರ ಹುಟ್ಟು ಹಬ್ಬವನ್ನು ಶನಿವಾರಸಂತೆ ಫೀಲ್ಡ್ ಮಾರ್ಷಲ್ ಜ. ಕಾರ್ಯಪ್ಪ ಅಭಿಮಾನಿಗಳ ಬಳಗ, ಗ್ರಾ.ಪಂ. ಹಾಗೂ ಸಾರ್ವಜನಿಕರು ಸೇರಿಕೊಂಡು ಆಚರಿಸಿದರು.
ಶನಿವಾರಸಂತೆಯ ಜನರಲ್ ಕಾರ್ಯಪ್ಪ ಅವರು ಜನಿಸಿದ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ಕಾರ್ಯಪ್ಪ ಅಭಿಮಾನಿ ಬಳಗ, ಕಾರ್ಯಪ್ಪ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಷನೆ ಮಾಡಿದರು. ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಪ್ಪ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಾಂಕೇತಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶನಿವಾರಸAತೆ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ. ಕಾಲೇಜಿನ ಶಿಕ್ಷಕ ಕೆ.ಪಿ. ಜಯಕುಮಾರ್ ಅವರು ಮಾತನಾಡಿ, ಭಾರತದ ಮೂರು ರಕ್ಷಣಾ ವಿಭಾಗಗಳ ಪ್ರಥಮ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಜ. ಕಾರ್ಯಪ್ಪ ಅವರು ಶಿಸ್ತಿನ ಸಿಪಾಯಿಯಾಗಿದ್ದು, ಅವರು ವರ್ಣಿಸಲಾರದ ವ್ಯಕ್ತಿತ್ವ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಎಸ್.ಎನ್. ರಘು ಸರ್ದಾರ್ ಅಹಮದ್, ಎಸ್.ಸಿ. ಶರತ್ ಶೇಖರ್, ಗೀತ ಹರೀಶ್, ಶನಿವಾರಸಂತೆ ಕ್ಪಷ್ಟರ್ ಸಿಆರ್ಪಿ ದಿನೇಶ್, ಕೊಡ್ಲಿಪೇಟೆ ಸಿಆರ್ಪಿ ಸುರೇಶ್, ಕಾರ್ಯಪ್ಪ ಅಭಿಮಾನಿ ಬಳಗದ ಬಿಲಾಲ್, ಗ್ರಂಥಾಲಯ ಮೇಲ್ವಿಚಾರಕಿ ಪ್ರಣುತ, ನಿವೃತ್ತ ಸೈನಿಕ ಬೆಳ್ಯಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ, ಪ್ರಮುಖರಾದ ಮೋಹನ್ಲಾಲ್ ಚೌದುರಿ, ನಿವೃತ್ತ ಗ್ರಂಥಪಾಲಕ ಮಹೇಶ್ ಮತ್ತು ಸಾರ್ವಜನಿಕರು ಹಾಜರಿದ್ದರು.