ಮಡಿಕೇರಿ, ಜ. ೨೮: ನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ಹಾವಳಿ ತಡೆಗೆ ಕೈಗೊಂಡಿರುವ ಸಂತಾನಹರಣ ಶಸ್ತç ಚಿಕಿತ್ಸೆಯ ಮೊದಲ ದಿನ ೨೧ ಬೀದಿನಾಯಿಗಳಿಗೆ ಶಸ್ತçಚಿಕಿತ್ಸೆ ಮಾಡಲಾಯಿತು.
ಸ್ಟೋನ್ಹಿಲ್ನ ಕಸವಿಲೇವಾರಿ ಆವರಣದ ಕೊಠಡಿಯಲ್ಲಿ ವೈದ್ಯರ ತಂಡ ನಾಯಿಗಳ ಸಂತಾನಹರಣ ಶಸ್ತç ಚಿಕಿತ್ಸೆ ನಡೆಸಿತು. ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದು, ಹಲವು ಸಮಯದಿಂದ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರಸಭೆ ಈ ಕ್ರಮಕ್ಕೆ ಮುಂದಾಗಿದೆ.
ಬೀದಿನಾಯಿಗಳನ್ನು ಅಮಾನವೀಯವಾಗಿ ಸೆರೆಹಿಡಿದು, ನಂತರ ಅವುಗಳನ್ನು ಕೊಲ್ಲುವದು ಅಪರಾಧವಾಗಿದ್ದು, ಈ ಹಿನ್ನೆಲೆ ಬೀದಿ ನಾಯಿಗಳ ಸೆರೆಗೆ ಪ್ರಾಣಿ ಕಲ್ಯಾಣ ಮಂಡಳಿ ಸೂಚಿಸಿರುವ ವಿಧಾನದಲ್ಲಿ ಹಿಡಿದು ಸಂತಾನ ಹರಣ ಮಾಡಿ ಚಿಕಿತ್ಸೆ
(ಮೊದಲ ಪುಟದಿಂದ) ನೀಡಲಾಗಿದೆ ಎಂದು ‘ಎನಿಮಲ್ ಪ್ರೊಟೆಕ್ಷನ್ ಐಂಡ್ ವೆಲ್ಫೇರ್ ಸೊಸೈಟಿ’ಯ ಮುಖ್ಯಸ್ಥ ಡಾ.ವಿಜಯ್ ‘ಶಕ್ತಿ’ಗೆ ತಿಳಿಸಿದರು.
ಬೆಳಗ್ಗೆ ೬ ಗಂಟೆ ಸುಮಾರಿಗೆ ‘ಅನಿಮಲ್ ಪ್ರೊಟೆಕ್ಷನ್ ಆ್ಯಂಡ್ ವೆಲ್ಫೇರ್ ಸೊಸೈಟಿ ಸಂಸ್ಥೆಯ ಐದು ಪ್ರತಿನಿಧಿಗಳು ನಗರ ಸಭೆಯ ಒಬ್ಬ ಪ್ರತಿನಿಧಿಯೊಂದಿಗೆ ನಗರಪ್ರದಕ್ಷಿಣೆ ನಡೆಸಿ ನಾಯಿಗಳನ್ನು ಗುರುತಿಸಿ ‘ಬಟರ್ಫ್ಲೆöÊ ನೆಟ್’ ಮೂಲಕ ಸೆರೆಹಿಡಿದು ಶಸ್ತçಚಿಕಿತ್ಸೆ ನಡೆಸಿದ ಬಳಿಕ ಮೂರು ದಿನ ಆರೈಕೆ ಮಾಡಿ ನಾಯಿಗಳನ್ನು ಎಲ್ಲಿಂದ ತರಲಾಗಿತ್ತೋ ಅಲ್ಲಿಗೆ ಬಿಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ತಂಡದ ಒಟ್ಟು ಎಂಟು ಜನ ಈ ಕಾರ್ಯಕ್ಕೆ ಮಡಿಕೇರಿಗೆ ಬಂದಿದ್ದು, ಶಸ್ತçಚಿಕಿತ್ಸೆಗೆ ಒಳಪಟ್ಟ ಎಲ್ಲಾ ನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದನ್ನೂ ನೀಡಲಾಗುತ್ತದೆ ಎಂದು ವಿಜಯ್ ತಿಳಿಸಿದರು. ಸಂಸ್ಥೆಯು ಎಲ್ಲಾ ಸಿದ್ಧತೆಗಳಿಂದ ಕೂಡಿದ್ದರೂ, ಆಪರೇಷನ್ ನಡೆಸಲು ಹಳೇ ಪೇಪರ್ಗಳ ಅವಶ್ಯಕತೆ ಇವೆೆ. ಅಲ್ಲದೆ, ಚಿಕಿತ್ಸೆ ನಂತರ ನಾಯಿಗಳ ಆರೈಕೆಗೆ ಅವಶ್ಯಕವಾದ ಆಹಾರವನ್ನು ದಾನಿಗಳು ನೀಡಬಹುದೆಂದು ವಿಜಯ್ ತಿಳಿಸಿದರು. ಸ್ಥಳಕ್ಕೆ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-ಪ್ರಜ್ಞಾ ಜಿ.ಆರ್.