ಮೂವತ್ತು-ಮೂವತ್ತೆöÊದು ವರ್ಷಗಳ ಹಿಂದಿನ ನೆನಪು.
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕನ ಚುನಾವಣೆಗೆ ಎಲ್ಲಿಲ್ಲದ ಸ್ಪರ್ಧೆ. ಕೊಡವ-ಗೌಡ ವಿದ್ಯಾರ್ಥಿಗಳ ನಡುವೆಯೇ ನೇರ ಹಣಾಹಣಿ, ಅದಕ್ಕೆ ಆಯಾ ಜನಾಂಗದವರಿAದ ಪ್ರೇರಣೆ.
ಚುನಾವಣಾ ದಿನ ಫಲಿತಾಂಶ ಬಂದ ಬಳಿಕ ತೆರೆದ ವಾಹನದಲ್ಲಿ ನಗರದಲ್ಲೆಲ್ಲಾ ಮೆರವಣಿಗೆ. ಡೊಳ್ಳು, ವಾದ್ಯ, ಕುಣಿತದ ಭರಾಟೆ. ಕತ್ತಲಾಗುತ್ತಲೇ ಎಲ್ಲ ಸಂಭ್ರಮಕ್ಕೂ ತೆರೆಬಿದ್ದಂತೆ ನಗರದ ಮಧ್ಯೆಯೇ ಪೆಟ್ಟಿನ ಪೈಪೋಟಿ; ತಳವಾರು, ಲಾಂಗ್ಗಳದ್ದೂ ಪ್ರದರ್ಶನ. ಕೆಲವರಾದರೂ ಆಸ್ಪತ್ರೆ ದಾಖಲು ಕಡ್ಡಾಯ.
ಹಲವಷ್ಟು ವರ್ಷಗಳ ಇಂತಹ ಬೆಳವಣಿಗೆಯಿಂದ ಕಾಲೇಜುಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನೇ ಬದಲಿಸಲಾಯಿತು; ಪರಿಣಾಮ - ದ್ವೇಷ, ಜಗಳ ಅಸಮಾಧಾನಗಳು ದೂರಾದವು. ವಿಭಜನೆಯಾದರೆ ನಷ್ಟ ಯಾರಿಗೆ ಎಂಬ ಅರಿವು ಮೂಡಿಸಿಕೊಂಡ ಜನಾಂಗಗಳು ಒಂದಾದವು.
ಜಿಲ್ಲೆಯಲ್ಲಿ ಕೊಡವ ಮತ್ತು ಗೌಡ ಜನಾಂಗಗಳು ಬಲಿಷ್ಠ ಹಾಗೂ ಪ್ರಭಾವಿ ಸ್ಥಿತಿಯವು. ಕೊಡವರದ್ದು ವೀರ ಪರಂಪರೆಯಾದರೆ, ಗೌಡರದ್ದೂ ಗುರುತಿಸಲ್ಪಟ್ಟ ಸಂಸ್ಕೃತಿ. ಕೊಡಗಿನ ಅಸ್ತಿತ್ವಕ್ಕೆ, ಕೊಡಗಿನ ಪ್ರಗತಿಗೆ ಇವರಿಬ್ಬರ ಒಗ್ಗಟ್ಟಿನ ಪರಿಶ್ರಮ ಗಣನೀಯವಾದುದು. ಗೌಡರ ಪ್ರಾಬಲ್ಯವಿರುವ ಚುನಾವಣಾ ಕ್ಷೇತ್ರದಲ್ಲಿ ಕೊಡವರನ್ನು, ಕೊಡವರ ಪ್ರಾಬಲ್ಯವಿರುವ ಚುನಾವಣಾ ಕ್ಷೇತ್ರದಲ್ಲಿ ಗೌಡರನ್ನು ಗೆಲ್ಲಿಸುವ ಹೃದಯ ವೈಶಾಲ್ಯತೆ ಈ ಜನರದ್ದು. ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗುವ ಸಂದರ್ಭ ಎದುರಾದಾಗ, ಕೊಡವ ಹಾಗೂ ಗೌಡ ಜನಾಂಗ ಒಗ್ಗಟ್ಟಾಗಿ ಪ್ರತಿರೋಧಿಸಿದ ಇತಿಹಾಸ ಹಾಗೂ ಘಟನೆಗಳು ನಮ್ಮಲ್ಲಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡೂ ಜನಾಂಗಗಳ ಸಾಮರಸ್ಯಕ್ಕೆ ಧಕ್ಕೆ ತರುವ, ಒಗ್ಗಟ್ಟನ್ನು ಮುರಿಯುವ, ಆರೋಗ್ಯಕರವಲ್ಲದ ಚರ್ಚೆಗಳು ಜಿಲ್ಲೆಯಲ್ಲಿ ‘ಬೂದಿ ಮುಚ್ಚಿದ ಕೆಂಡ’ವನ್ನು ಸೃಷ್ಟಿ ಮಾಡಿವೆ.
ಸಾಮಾಜಿಕ ಜಾಲತಾಣ ಬಂದ ನಂತರವAತೂ, ಅಸಮಾಧಾನದ ಬೆಂಕಿಗೆ ತುಪ್ಪ ಸುರಿದು, ಅಸೂಯೆಯನ್ನು ಪ್ರೇರೇಪಿಸುವ, ದ್ವೇಷವನ್ನು ಮೂಡಿಸುವ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಸಂಬAಧಿಸದೆ ಇರುವವರು ಇಂತಹ ಸಂದೇಶಗಳನ್ನು ಓದಿ ನಗುವ ಸ್ಥಿತಿ ತಲುಪಿದೆ.
ಕೋವಿ ಹಕ್ಕಿನ ಕುರಿತು ವಕೀಲರೊಬ್ಬರು ಮೊಕದ್ದಮೆ ಹೂಡಿದಾಗ ಅಲ್ಲಲ್ಲೇ ವಿಷದ ಬೀಜ ಮೊಳಕೆಯೊಡೆಯಲು ಆರಂಭವಾಯಿತಾದರೂ, ಎರಡೂ ಜನಾಂಗಗಳು ಒಗ್ಗಟ್ಟಿನಿಂದ ಜೊತೆ ನಿಂತು, ಆ ನಡೆಯನ್ನು ಖಂಡಿಸಿದ್ದು ಇತ್ತೀಚಿನ ಬೆಳವಣಿಗೆ.
ಇದೀಗ ಕೂರ್ಗ್ ಬೈ ರೇಸ್ ವಿಚಾರ ಕಿಡಿ ಹತ್ತಿಸಿದೆ. ಈ ಬಗ್ಗೆ ಕೊಡವ ಜನಾಂಗದ ಹಿರಿಯ ಸಂಸ್ಥೆ ಅಖಿಲ ಕೊಡವ ಸಮಾಜ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ಗೌಡ ಜನಾಂಗದ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಹೇಳಿಕೆಗಳು ವಿಷಯಾಧಾರಿತವಾಗಿದ್ದರೆ ಅಂತಹ ಚರ್ಚೆಗಳು ಆರೋಗ್ಯಕರವಾಗಿರುತ್ತವೆ. ಮೊಸರು ಕಡೆದರೆ ಬೆಣ್ಣೆ ಎಂಬAತೆ ಅಭಿಪ್ರಾಯಗಳಲ್ಲಿ ಭಿನ್ನತೆ ಇರಬೇಕು. ಆದರೆ ಪ್ರಚೋದನಾತ್ಮಕವಾಗಿರಬಾರದು. ಮೇಲು-ಕೀಳುಗಳ ಚಿಂತನೆ, ಪ್ರಾಬಲ್ಯಗಳ ಪ್ರಸ್ತಾವನೆಗಳು ಸಮಸ್ಯೆಯನ್ನು ಪರಿಹರಿಸುವುದರ ಬದಲು ಸಂಘರ್ಷವನ್ನು ಆಹ್ವಾನಿಸುತ್ತವೆ. ಜಾತಿ, ಮತ, ಧರ್ಮಗಳ ವಿಚಾರಗಳು ಇಡೀ ವಿಶ್ವದಲ್ಲೇ ಅತ್ಯಂತ ಸೂಕ್ಷö್ಮ; ಅವುಗಳ ಪರಿಣಾಮಗಳು ಏನಾಗಿವೆ, ಏನಾಗುತ್ತಿವೆ ಎಂಬುದರ ಅರಿವು ಎಲ್ಲರಿಗೂ ಇದೆ.
ಹಾಗಾಗಿ ಜಿಲ್ಲೆಯಲ್ಲೂ ಅತ್ಯಂತ ಅವಶ್ಯವಾಗಿರುವ, ಪ್ರಬಲವಾಗಿರುವ, ಅನಿವಾರ್ಯವಾಗಿರುವ ಕೊಡವ ಮತ್ತು ಗೌಡ ಜನಾಂಗಗಳು ಭಿನ್ನಾಭಿಪ್ರಾಯಗಳನ್ನು ಜೊತೆಗೂಡಿ ಚರ್ಚಿಸಿ ಪರಿಹರಿಸಿಕೊಳ್ಳುವತ್ತ ತುರ್ತಾಗಿ ಮುಂದಾಗಬೇಕಿದೆ.
ರಾಜಕೀಯವಾಗಿ, ಶೈಕ್ಷಣಿಕವಾಗಿ, ಬೆಳವಣಿಗೆಯಲ್ಲೂ ಕೊಡಗನ್ನು ನಿರ್ಲಕ್ಷಿಸುವ ವ್ಯವಸ್ಥೆಯಡಿ ಕೊಡವ-ಗೌಡ ಜನಾಂಗದ ಒಡಕು, ಅಂತಹವರಿಗೆ ಒಂದು ಅಸ್ತçವಾಗಿ ಲಭಿಸದಿರಲಿ.
ಗಂಭೀರವಾದ ಈ ವಿಷಯದ ಬಗ್ಗೆ ಜಿಲ್ಲೆಯ ಹಿರಿಯರು, ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಲಿ, ಈ ಬಗ್ಗೆ ಪರವಿರೋಧದ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆಗಳು, ನಿಂದನೆಗಳು ಜಿಲ್ಲೆಯ ಒಗ್ಗಟ್ಟಿಗೆ ಮಾರಕವಾಗದಿರಲಿ. ಹಾಗಾಗಿ ಅವುಗಳಿಗೆ ಇಂದೇ ಅಂತ್ಯವಿರಲಿ.
‘ಅooಡಿg ಃಥಿe ಖಚಿಛಿe’ ಕುರಿತು ಎರಡೂ ಜನಾಂಗದ ಪ್ರಬಲ ನಾಯಕರ ಅಭಿಪ್ರಾಯಗಳು ಈಗಾಗಲೇ ಪ್ರಕಟವಾಗಿರುವುದರಿಂದ ‘ಆರೋಗ್ಯಕರ ಸಮಾಜದ’ ಕಲ್ಪನೆಯಲ್ಲಿ ಇಂದಿನಿAದ ಬೇರೆ ಯಾವುದೇ ಹೇಳಿಕೆಗಳನ್ನು ‘ಶಕ್ತಿ’ಯಲ್ಲಿ ಪ್ರಕಟಿಸುವುದಿಲ್ಲ.
-ಜಿ. ಚಿದ್ವಿಲಾಸ್
ಸಂಪಾದಕ