ಮಡಿಕೇರಿ, ಜ. ೧೬: ಸ್ಕೂಟರ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ಮಡಿಕೇರಿಯ ನಿವಾಸಿ, ಮೈಸೂರಿನ ಖಾಸಗಿ ಕಾಲೇಜಿನ ಇಂಜಿನಿಯರಿAಗ್ ವಿದ್ಯಾರ್ಥಿ ಯಕ್ಷಿತ್ (೨೦) ಬಂಧಿತ ಆರೋಪಿ. ಕಳೆದ ಅಕ್ಟೋಬರ್‌ನಲ್ಲಿ ನಗರದ ಜಿಲ್ಲಾಸ್ಪತ್ರೆಯ ನರ್ಸ್ ಉಷಾ ಎಂಬವರಿಗೆ ಸೇರಿದ ಸ್ಕೂಟರ್ ಕಳುವಾಗಿತ್ತು. ಈ ಸಂಬAಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯಕ್ಷಿತ್ ಸ್ಕೂಟರ್ ಕದ್ದು ಮೈಸೂರಿನಲ್ಲಿ ಬಳಸುತ್ತಿದ್ದ. ರಜೆ ಹಿನ್ನೆಲೆ ಶುಕ್ರವಾರ ಮನೆಗೆ ಬಂದ ಆರೋಪಿ ವಾಹನವನ್ನು ಮನೆಗೆ ತೆಗೆದುಕೊಂಡು ಹೋದರೆ ಕುಟುಂಬಕ್ಕೆ ತಿಳಿಯುತ್ತದೆ ಎಂದು ಯಾರಿಗೂ ಕಾಣದಂತೆ ನಿಲ್ಲಿಸಿ ಹೋಗಿದ್ದ. ಮಾಹಿತಿ ಆಧಾರದಲ್ಲಿ ಇದನ್ನು ಪತ್ತೆಹಚ್ಚಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಗರ ಠಾಣೆಯ ಠಾಣಾಧಿಕಾರಿ ಅಂತಿಮ, ಅಪರಾಧ ಪತ್ತೆದಳದ ಸಬ್‌ಇನ್ಸ್ಪೆಕ್ಟರ್ ಕೆ.ವೈ. ಹಮೀದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣಾ ಹಾಗೂ ಅಪರಾಧ ಪತ್ತೆದಳ ಸಿಬ್ಬಂದಿಗಳಿದ್ದರು.