ಮಡಿಕೇರಿ, ಜ. ೪: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್, ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ, ಭಾರತೀಯ ರಾಷ್ಟಿçÃಯ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ಉಗ್ರಾಣದ ಉಪಯುಕ್ತತೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವು ಕುಶಾಲನಗರದ ಎಪಿಸಿಎಂಎಸ್ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರೈತ ಸದಸ್ಯರು, ಎಪಿಸಿಎಂಎಸ್ ಕುಶಾಲ ನಗರ ಇದರ ಉಪಾಧ್ಯಕ್ಷ ಜಗದೀಶ್ ಹಾಗೂ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾದ ಮಧುಕರ್ ಹಾಗೂ ಹೊಸ ಗೌಡರ್, ಕೃಷಿ ವಿಜ್ಞಾನಿ ಮತ್ತು ಉಪನ್ಯಾಸಕರು, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ರವಿಶಂಕರ್, ಉಪ ವ್ಯವಸ್ಥಾಪಕರು, ಬೀಜ ನಿಗಮ ಮೈಸೂರು ಹಾಗೂ ನಗರದ ಕೆಐಸಿಎಂ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕಾ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.