ಸೋಮವಾರಪೇಟೆ, ಡಿ. ೫: ತಾಲೂಕಿನ ಆಡಿನಾಡೂರು ಹಾಗೂ ಹೊಸಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕೃಷಿ ಪಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ.
ಕೃಷಿ ಭೂಮಿಯಲ್ಲಿ ಮನಸೋಯಿಚ್ಛೆ ಓಡಾಡುತ್ತಿರುವ ಕಾಡಾನೆಗಳ ಹಿಂಡು, ಜೋಳ, ಕ್ಯಾನೆಗೆಣಸು, ಸಿಹಿ ಗೆಣಸು ಫಸಲನ್ನು ನಷ್ಟಗೊಳಿಸುತ್ತಿವೆ. ಇದರಿಂದ ಕಂಗಾಲಾಗಿದ್ದಾರೆ.
ಕೃಷಿ ಭೂಮಿಯಲ್ಲಿ ಮನಸೋಯಿಚ್ಛೆ ಓಡಾಡುತ್ತಿರುವ ಕಾಡಾನೆಗಳ ಹಿಂಡು, ಜೋಳ, ಕ್ಯಾನೆಗೆಣಸು, ಸಿಹಿ ಗೆಣಸು ಫಸಲನ್ನು ನಷ್ಟಗೊಳಿಸುತ್ತಿವೆ. ಇದರಿಂದ ನಷ್ಟವಾಗಿದ್ದು, ಅಳಿದುಳಿದ ಫಸಲನ್ನಾದರೂ ಪಡೆಯುವ ಆಸೆಯಲ್ಲಿದ್ದ ಕೃಷಿಕರಿಗೆ ಕಾಡಾನೆಗಳು ಕಂಟಕವಾಗಿ ಪರಿಣಮಿಸಿವೆ.
ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಆಡಿನಾಡೂರು ಮತ್ತು ನೇರುಗಳಲೆ ಪಂಚಾಯಿತಿಗೆ ಒಳಪಡುವ ಹೊಸಳ್ಳಿ ಗ್ರಾಮಗಳಲ್ಲಿ ಕಾಡಾನೆಯ ಗುಂಪು ಬೀಡುಬಿಟ್ಟಿವೆ. ಗ್ರಾಮದ ತೋಟ, ಗದ್ದೆ, ಹೊಲಗಳಲ್ಲಿರುವ ಫಸಲುಗಳನ್ನು ಧ್ವಂಸಗೊಳಿಸಿವೆ.
ಕಾಡಾನೆಗಳ ಹಾವಳಿ ಹೀಗೆ ಮುಂದುವರೆದರೆ ಜೀವನ ಸಾಗಿಸುವುದು ದುಸ್ತರವಾಗಲಿದೆ. ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.