ಮಡಿಕೇರಿ, ನ. ೨೯: ಪೆರುಮುಂಡ-ಕುAಡಾಡು ಕೂಡು ರಸ್ತೆಯ ಗಿರೀಶ್ ಪೆರುಮುಂಡ ಅವರ ಮನೆಯ ಬಳಿಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಒಂದು ವರ್ಷಗಳಿಂದ ದುಸ್ಥಿತಿ ಯಲ್ಲಿದ್ದ ರಸ್ತೆಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ಕಾಂಕ್ರೀಟಿಕರಣಕ್ಕೆ ಭೂಮಿ ಪೂಜೆಯನ್ನು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಶೋಕ ಪೆರುಮುಂಡ ನೆರವೇರಿಸಿದರು.
ಬಿಜೆಪಿ ರೈತಮೋರ್ಚಾ ಕೊಡಗು ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ.ಸದಸ್ಯ ನಂಜಪ್ಪ ನಿಡ್ಯಮಲೆ, ಬಿಜೆಪಿ ಮುಖಂಡರಾದ ರಾಜಶೇಖರ ನಿಡ್ಯಮಲೆ, ಪ್ರಸನ್ನ ನೆಕ್ಕಿಲ, ಗಣೇಶ ನೆಡ್ಚಿಲ್, ರಸ್ತೆ ಫಲಾನುಭವಿಗಳಾದ ಪದ್ಮಯ್ಯ ಪೆರುಮುಂಡ, ಮುಕುಂದ ಪೆರುಮುಂಡ, ವಾಸುದೇವ ಪೆರುಮುಂಡ, ರುಕ್ಮಯ್ಯ ಪೆರುಮುಂಡ, ಸುಮಿತ್ರ ಪೆರುಮುಂಡ, ಶಿವ ಕುಮಾರ ಪೆರುಮುಂಡ ಇದ್ದರು. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ತಮ್ಮ ಅವಧಿಯಲ್ಲಿ ತಾಲೂಕು ಪಂಚಾಯತ್ನ ರೂ. ೩ ಲಕ್ಷ ಅನುದಾನ ಮಂಜೂರು ಗೊಳಿಸಿದ್ದು, ಅದರ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.