ಸೋಮವಾರಪೇಟೆ,ನ.೨೫: ಧಾರವಾಡದ ಸಂಗಾತ ಪುಸ್ತಕ ಆಯೋಜಿಸಿದ್ದ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರಕ್ಕೆ ಜಿಲ್ಲೆಯ ಕವಿ ಕಾಜೂರು ಸತೀಶ್ ಅವರ ‘ಕಣ್ಣಲ್ಲಿಳಿದ ಮಳೆ ಹನಿ’ ಹಸ್ತ ಪ್ರತಿ ಆಯ್ಕೆಯಾಗಿದೆ.

ಜಿ.ಪಿ. ರಾಜರತ್ನಂ ಜನ್ಮದಿನವಾದ ಡಿ. ೫ರಂದು ಧಾರವಾಡದಲ್ಲಿ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಗಾತ ಪುಸ್ತಕ ಪ್ರಕಾಶಕ ಟಿ.ಎಸ್. ಗೊರವರ ತಿಳಿಸಿದ್ದಾರೆ. ಕವಿಗಳಾದ ಎಚ್.ಎಸ್. ಮುಕ್ತಾಯಕ್ಕ ಹಾಗೂ ಎಂ.ಡಿ. ಒಕ್ಕುಂದ ಅವರುಗಳು ತೀರ್ಪುಗಾರರಾಗಿದ್ದರು.