ಪೊನ್ನಂಪೇಟೆ, ನ. ೭: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ.೯೪.೧೩ ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ.೧೦೧.೪೧ ಲಕ್ಷ ಕ್ರೂಢೀಕೃತ ವ್ಯಾಪಾರ ಲಾಭ ಹಾಗೂ ರೂ. ೩೭.೫೦ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಮಾಹಿತಿ ನೀಡಿದರು.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ೨೭೬೧ ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿಯಲ್ಲಿ ಮುನ್ನಡೆ ಯುತ್ತಿರುವುದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಈ ಬಾರಿ ಶೇ. ೧೫ ರಷ್ಟು ಡಿವಿಡೆಂಟ್ ನೀಡಲಾಗುವುದು.
ಸದಸ್ಯರ ಪಾಲು ಹಣ ರೂ. ೮೫.೫೧ ಲಕ್ಷ, ಸಂಘದ ಕ್ಷೇಮನಿಧಿ ರೂ. ೧೧೫.೬೯ ಲಕ್ಷ, ಇತರೆ ಠೇವಣಿ ನಿಧಿಗಳು ಸೇರಿ ರೂ. ೪೭೩.೮೦ ಲಕ್ಷ, ಇತರೆ ಸಂಸ್ಥೆಗಳ ಪಾಲು ಮತ್ತು ಠೇವಣಿ ರೂ. ೨೪೫.೭೪ ಲಕ್ಷ ತೊಡಗಿಸಲಾಗಿದೆ. ಸಂಘದ ಚರ ಸ್ಥಿರಾಸ್ತಿ ಮೌಲ್ಯ ರೂ. ೨೭೮.೩೬ ಲಕ್ಷಗಳಾಗಿವೆ ಎಂದು ತಿಳಿಸಿದರು.
೧೯೩೦ ರಲ್ಲಿ ಪೊನ್ನಂಪೇಟೆ ನಾಡು ಕ್ರಾಪ್ ಲೋನ್ ಸೇಲ್ ಮತ್ತು ಸಪ್ಲö್ಯ ಲಿ. ಎಂಬ ನಾಮಕರಣದಿಂದ ಪ್ರಾರಂಭವಾದ ಸಂಘವು, ೧೯೫೮ ರಲ್ಲಿ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಎಂದು ಹೆಸರು ನೋಂದಾಯಿಸಿಕೊAಡು, ತನ್ನ ಕಾರ್ಯಕ್ಷೇತ್ರವನ್ನು ಪೊನ್ನಂಪೇಟೆ ನಾಡಿನ ೧೫ ಗ್ರಾಮಗಳು ಮತ್ತು ಶ್ರೀಮಂಗಲ ನಾಡಿನ ೬ ಗ್ರಾಮಗಳು ಒಳಗೊಂಡAತೆ ಒಟ್ಟು ೨೧ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಂಘವು ರೈತ ಸದಸ್ಯರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ಅವಶ್ಯಕ ವಸ್ತುಗಳಾದ ಸಿಮೆಂಟ್, ಹತ್ಯಾರು, ಬಟ್ಟೆ, ಮುಳ್ಳು ತಂತಿ, ಆರ್.ಸಿ.ಸಿ. ಮೋರಿ, ಪೈಪ್, ಗೃಹ ಬಳಕೆ ವಸ್ತುಗಳು, ಕೋವಿ, ಕೋವಿ ತೋಟ, ಅಲ್ಲದೆ ಸರ್ಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಕರಾಗಿ ಹಾಗೂ ಆರ್.ಟಿ.ಸಿ ವಿತರಿಸುವ ಕಾರ್ಯನಿರ್ವಹಿಸುತ್ತಿದ್ದು, ರೈತರ ಅನುಕೂಲಕ್ಕಾಗಿ ಪ್ರತಿ ಗಂಟೆಗೆ ೧.೫ ಟನ್ನು ಸಾಮರ್ಥ್ಯದ ಬಿನ್ನಿ ಅಕ್ಕಿಗಿರಣಿ ಹೊಂದಿರುತ್ತದೆ. ಸಂಘವು ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಚಿಲ್ಲರೆ ಮಾರಾಟದ ಪೆಟ್ರೋಲ್ ಬಂಕ್ ಹೊಂದಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ.
ಭತ್ತ, ಕಾಫಿ ಮತ್ತು ಕಾಳು ಮೆಣಸು ದಾಸ್ತಾನು ಇಡಲು ಸುಸಜ್ಜಿತವಾದ ಗೋದಾಮು ಸೌಲಭ್ಯ ಹೊಂದಿದ್ದು, ರೈತ ಸದಸ್ಯರ ಹುಟ್ಟುವಳಿಯ ಆಧಾರದ ಮೇಲೆ ಈಡಿನ ಸಾಲ ಕೊಡುವ ವ್ಯವಸ್ಥೆ ಇದೆ. ರೈತ ಸದಸ್ಯರ ಅನುಕೂಲಕ್ಕಾಗಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಕಾಫಿ ಗಿರಣಿ (ಹಲ್ಲಿಂಗ್) ಘಟಕವನ್ನು ಪ್ರಾರಂಭಿಸಲಾಗಿದೆ. ಸಂಘವು ಉತ್ತಮ ನಿರ್ವಹಣೆಯ ೧.೮೦ ಎಕ್ರೆ ಕಾಫಿ ತೋಟವನ್ನು ಹೊಂದಿರುತ್ತದೆ, ಸದಸ್ಯರ ಅನುಕೂಲಕ್ಕಾಗಿ ೧೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣ ಸಹಕಾರ ಬ್ಯಾಂಕಿನ ಸಮೀಪ ಇರುವ ಸಂಘದ ನಿವೇಶನದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸುವ ಉದ್ದೇಶ ಹೊಂದ ಲಾಗಿದೆ ಎಂದು ವಿವರಿಸಿದರು.
ಸದಸ್ಯರುಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ಆಡಳಿತ ಮಂಡಳಿ ನಡೆಸಿದೆ.
ಈ ಸಂದರ್ಭ ಉಪಾಧ್ಯಕ್ಷ ಎಸ್. ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ.ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಐನಂಡ ಕೆ. ಬೋಪಣ್ಣ, ಮಾಚಂಗಡ ಬಿ. ಮೊಣ್ಣಪ್ಪ, ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ಮೂಕಳೇರ ಪಿ. ಶಾರದ, ಬಿ.ಎಸ್. ಚಂದ್ರಶೇಖರ್, ಪುತ್ತಮನೆ ದೇವದಾಸ್ ಜೀವನ್, ಹೆಚ್.ಹೆಚ್. ತಮ್ಮಯ್ಯ, ಎಂ. ಡಿಕ್ಕಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಟಿ. ಪೂನಂ ಹಾಜರಿದ್ದರು.