ವೀರಾಜಪೇಟೆ, ಅ. ೧೫: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ೨ ವರ್ಷಗಳಲ್ಲಿ ೩,೧೭,೨೩೭ ನಿವ್ವಳ ಲಾಭ ಹೊಂದಿದೆ. ಕಳೆದ ೨ ವರ್ಷಗಳಿಂದ ಕೋವಿಡ್ ಇದ್ದರೂ ಕೂಡ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಹಾಗೂ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನ ದೊರಕಿದೆ ಎಂದು ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ವೀರಾಜಪೇಟೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೯ ಸೆಪ್ಟಂಬರ್‌ನಲ್ಲಿ ಪ್ರಾರಂಭ ಗೊಂಡ ಸಂಸ್ಥೆಯಲ್ಲಿ ಒಟ್ಟು ೧,೦೭೩ ಸದಸ್ಯರಿದ್ದಾರೆ. ೨೦೨೦-೨೧ ಸಾಲಿನಲ್ಲಿ ೩೯.೭೨ ಲಕ್ಷ ಪಾಲು ಬಂಡವಾಳ ಇದೆ. ವಿವಿಧ ಠೇವಣಿಗಳಿಂದ ೨೭೨.೭೧ ಲಕ್ಷ ಸಂಗ್ರಹಣೆ ಆಗಿದೆ. ಸದಸ್ಯರಿಗೆ ೧೮೨.೭೨ ಲಕ್ಷ ಸಾಲ ವಿತರಿಸಲಾಗಿದ್ದು, ವಿತರಿಸಿದ ಸಾಲ ೩೧.೦೩.೨೦೨೧ ಕ್ಕೆ ಶೇ. ೧೦೦ ರಷ್ಟು ವಸೂಲಾತಿ ಆಗಿದೆ. ಕೊಡಗು ಡಿಸಿಸಿ ಬ್ಯಾಂಕ್‌ನಲ್ಲಿ ೧೭೦ ಲಕ್ಷ ಹೂಡಿಕೆ ಮಾಡಲಾಗಿದೆ. ಈ ಸಹಕಾರಿಯು ಸಂಪೂರ್ಣ ಗಣಕೀಕೃತವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸಂಸ್ಥೆಯಲ್ಲಿ ಎಲ್ಲಾ ವಿದಧ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿಗಳೊಂದಿಗೆ ಸದಸ್ಯರಿಗೆ ವಿತರಿಸಲಾಗುವುದು. ಸದಸ್ಯರುಗಳು, ಸಿಬ್ಬಂದಿಗಳು, ಪಿಗ್ಮಿ ಏಜೆಂಟರುಗಳ ಪರಿಶ್ರಮದಿಂದ ಪ್ರಗತಿಯತ್ತ ಸಾಗುತ್ತಿದೆ.

ಸಂಸ್ಥೆಯ ಮಹಾಸಭೆ ತಾ. ೨೩ ರಂದು ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಕಟ್ಟಡದಲ್ಲಿ ನಡೆಯಲಿದ್ದು ಆಡಿಟ್ ವರದಿಯನ್ನು ವೀಕ್ಷಿಸಲು ಇಚ್ಚಿಸುವ ಸದಸ್ಯರು ಕೆಲಸದ ವೇಳೆಯಲ್ಲಿ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್‌ಕುಮಾರ್, ನಿದೇರ್ಶಕರುಗಳಾದ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಪರದಂಡ ಮುತ್ತಣ್ಣ ಸೋಮಣ್ಣ, ಚೇಂದ್ರಿಮಾಡ ನಂಜಪ್ಪ, ಕೇಳಪಂಡ ವಿಶ್ವನಾಥ್, ಕೊಂಗAಡ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಕಾರ್ಯ ನಿರ್ವಹಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.