ಗೋಣಿಕೊಪ್ಪ ವರದಿ, ಅ. ೧೩: ಶ್ರೀಮಂಗಲ ಕರುಣಾ ಟ್ರಸ್ಟ್ ವತಿಯಿಂದ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಗರ್ಭಿಣಿ, ಬಾಣಂತಿಯರು, ಅಂಗವಿಕಲತೆಯರು, ಕಡು ಬಡವರಿಗೆ ಮತ್ತು ಶ್ರೀಮಂಗಲ ವ್ಯಾಪ್ತಿ ಆಶಾಕಾರ್ಯಕರ್ತರಿಗೆ ಪೌಷ್ಟಿಕಾಂಶ ಕಿಟ್ ವಿತರಿಸಲಾಯಿತು.

ಕಡಲೆ, ಹಸಿರುಕಾಳು, ಬೇಳೆ, ಅಡುಗೆ ಎಣ್ಣೆ, ಅರಶಿನ ಪುಡಿ, ಸೋಪು, ಗೋಧಿಹಿಟ್ಟು, ಕಡಲೆ ಬೇಳೆ, ರವೆ ನೀಡಲಾಯಿತು.

ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ, ಉಪಾಧ್ಯಕ್ಷೆ ಚೋಕಿರ ಕಲ್ಪನ ತಿಮ್ಮಯ್ಯ, ಸದಸ್ಯರಾದ ಚೋನಿರ ಕಾಳಯ್ಯ, ಗೋಪಿ, ರಾಣಿ, ಶ್ರೀಮಂಗಲ ಆರೋಗ್ಯ ಕೇಂದ್ರ ವೈದ್ಯ ಡಾ. ಕವನ್‌ಕುಮಾರ್ ವಿತರಿಸಿದರು.