ಮಡಿಕೇರಿ, ಅ. ೧೩: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕುಶಾಲನಗರ ಮೂಟೇರ ಕಮಲ ಅಯ್ಯಣ್ಣ ಅವರ ಪ್ರಾಯೋಜಕತ್ವದಲ್ಲಿ ಮಡಿಕೇರಿಯ ಗೌಡ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ಶಾರದಾ ಪೂಜೆ ನಡೆಯಿತು.

ಇದೇ ಸಂದರ್ಭ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಅವರ ಹಸೆಮಣೆ ಸೋಬಾನೆ ಪುಸ್ತಕದ ನಾಲ್ಕನೆಯ ಮುದ್ರಣವನ್ನು ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಚೀಯಂಡಿ ರಾಧಾ ಯಾದವ ಅವರು ಬಿಡುಗಡೆ ಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಸೆಮಣೆ ಪುಸ್ತಕ ಪ್ರತಿಯೊಬ್ಬ ಗೌಡ ಕುಟುಂಬದ ಮನೆಯಲ್ಲಿ ಇರಬೇಕು. ಇದೊಂದು ಅಮೂಲ್ಯ ಸಂಗ್ರಹ. ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಈ ಪುಸ್ತಕ ತುಂಬಾ ಪ್ರಯೋಜನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಕೂಡಕಂಡಿ ಕಾವೇರಮ್ಮ ಸೋಮಣ್ಣ,ಬೈತಡ್ಕ ಜಾನಕಿ ಬೆಳ್ಯಪ್ಪ, ಅಮೆ ದಮಯಂತಿ, ಕಡ್ಲೇರ ತುಳಸಿ ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.