ಮಡಿಕೇರಿ, ಸೆ. ೧೫: ಜೈವಿಕ ವಿಜ್ಞಾನ ವಿಷಯದಲ್ಲಿ ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿಯ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಮೂಲಕ ಕೊಡಗಿನ ಮಂಡಿರ ತೇಜ್ ಗಣಪತಿ ಅವರಿಗೆ ಪಿಹೆಚ್ಡಿ ಲಭಿಸಿದೆ.
‘‘ಂಟಿಚಿಟಥಿsiಟಿg ಣhe ಡಿoಟe oಜಿ ಃioಚಿಛಿಣive moಟeಛಿuಟe ಃeಡಿgeಟಿiಟಿ iಟಿ moಜuಟಚಿಣiಟಿg ಓeuಡಿoiಟಿಜಿಟಚಿmmಚಿಣioಟಿ’’ ಸಂಬAಧ ನಡೆಸಿದ ಅಧ್ಯಯನಕ್ಕೆ ಇವರಿಗೆ ಪಿ.ಹೆಚ್.ಡಿ ಲಭಿಸಿದೆ.
ಮಡಿಕೇರಿ ಸಂತ ಜೋಸೆಫರ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇವರು ಜೆ.ಎಸ್.ಎಸ್. ಕಾಲೇಜಿನಲ್ಲಿ ಬಯೋ ಕೆಮಿಸ್ತಿç ವಿಷಯದಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡಿ ಕಾಲೇಜಿಗೆ ೨ನೇ ಸ್ಥಾನ ಪಡೆದಿದ್ದರು.
ಪಿ.ಹೆಚ್.ಡಿ. ಸಂಬAಧ ನಡೆಸಿದ ಅಧ್ಯಯನಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವತಿಯಿಂದ ಸೀನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಕೂಡ ಇವರಿಗೆ ಲಬಿಸಿದೆ. ಇವರು ಮಡಿಕೇರಿಯ ದೇಚೂರು ನಿವಾಸಿ ನೆಲಜಿಯವರಾದ ಮಂಡಿರ ಗಣಪತಿ (ಗಣೇಶ್) ಹಾಗೂ ಶಶಿ (ತಾಮನೆ ಕೇಟೋಳಿರ) ದಂಪತಿಯ ಪುತ್ರಿ.