ಕೂಡಿಗೆ, ಸೆ. ೨: ಕೂಡಿಗೆಯಲ್ಲಿರುವ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ೧೯೯೦-೯೧ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನೇಹಕೂಟ ಮತ್ತು ಗುರುವಂದನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ನಿವೃತ್ತ ಶಾಲಾ ಮುಖ್ಯ ಶಿಕ್ಷಕಿ ಪಿ.ಜಿ. ಪಾರ್ವತಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯ ದುರ್ಗೇಶ್ ವಹಿಸಿದ್ದರÀÄ. ಸಭೆಯಲ್ಲಿ ಶಾಲಾ ಶಿಕ್ಷಕರ ವೃಂದ ಮತ್ತು ನಿವೃತ್ತ ಶಿಕ್ಷಕರು, ಕಾರ್ಯಕ್ರಮ ಆಯೋಜಕರಾದ ವಕೀಲ ಮಂಜುನಾಥ ಸುಬ್ರಮಣ್ಯ ಸೇರಿದಂತೆ ಹಲವರು ಹಾಜರಿದ್ದರು.

ಈ ಸಂದರ್ಭ ಶಾಲೆಯ ಶಿಕ್ಷಕರುಗಳಾದ ಪಾರ್ವತಿ, ರೋಹಿಣಿ, ಪದ್ಮ, ಸುಲೋಚನ, ಚನ್ನಬಸವಯ್ಯ ಅವರುಗಳನ್ಮು ಗೌರವಿಸಲಾಯಿತು. ಕೆ.ಸಿ. ಜ್ಯೋತಿ ನಿರೂಪಿಸಿ, ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಸ್ವಾಗತಿಸಿ, ವಂದಿಸಿದರು.