ಮಡಿಕೇರಿ, ಸೆ. ೨: ಕುಶಾಲನಗರದ ಸಂಗಮ ಟಿ.ವಿ.ಯ ಸಂಪಾದಕÀ ಹೆಚ್.ಎಂ. ರಘುಕೋಟಿ ಅವರಿಗೆ ಕರ್ನಾಟಕ ಡಿ.ವಿ.ಜಿ. ಪ್ರಶಸ್ತಿ ಮತ್ತು ಕುಶಾಲನಗರದ ತಾಲೂಕು ಆರ್ಯುವೇದ ವೈದ್ಯಾಧಿಕಾರಿ ಡಾ. ಭರತ್ ಎಸ್.ಎಂ. ಅವರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿ ಲಭಿಸಿದೆ. ಜನ್ಮ ಭೂಮಿ ಫೌಂಡೇಷನ್ ಬೆಂಗಳೂರು ವತಿಯಿಂದ ಬೆಂಗಳೂರಿನ ಸ್ಯಾಂಕ್‌ಟಮ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊರೊನಾ ಪರಿಸ್ಥಿತಿಯಲ್ಲಿ ಸಾಮಾಜಿಕ ಕಾರ್ಯ ಹಾಗೂ ಮಾಧ್ಯಮದ ಮೂಲಕ ಮಾನವೀಯ ವರದಿಗಳನ್ನು ಪ್ರಸಾರ ಮಾಡಿದ ಹಿನ್ನೆಲೆ ರಘು ಅವರು ಡಿ.ವಿ.ಜಿ. ಪ್ರಶಸ್ತಿ ಪಡೆದುಕೊಂಡಿದ್ದಾರೆ.