ಮಡಿಕೇರಿ, ಆ. ೨೬: ತಾ. ೨೨ ರಂದು ಜಗದ್ಗುರು ಶ್ರೀ ಸಿದ್ದರೂಢ ಸ್ವಾಮಿಗಳ ಪುಣ್ಯಾರಾಧನಾ ದಿನವನ್ನು ಸರಳವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಸಿದ್ದುಸ್ವಾಮಿ ಜಗದ್ಗುರು ಅವರ ನೇತೃತ್ವದಲ್ಲಿ ಬೆಳಿಗ್ಗೆ ನಿತ್ಯಪೂಜೆ ನಂತರ ಅಷ್ಟೋತ್ತರ ಬಿಲ್ವಾರ್ಚನೆ ಪಾಧುಕಾಭಿಷೇಕ, ಭಜನೆ, ಪಾರಾಯಣ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.