*ಗೋಣಿಕೊಪ್ಪ, ಆ. ೨೬: ಮತ್ಸಾ÷್ಯಶ್ರಯ ಯೋಜನೆಯಡಿಯಲ್ಲಿ ಮಂಜೂರು ಮಾಡಿರುವ ಮನೆಗಳನ್ನು ಹೊಂದುವ ಫಲಾನುಭವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಅರ್ಹತಾ ಪತ್ರವನ್ನು ವಿತರಿಸಿದರು.

ವೀರಾಜಪೇಟೆ ಶಾಸಕರ ಕಚೇರಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಆಯ್ಕೆಯಾದ ೫ ಫಲಾನುಭವಿಗಳಿಗೆ ೧೨ನೇ ಹಂತದ ಯೋಜನೆಯಡಿ ಅರ್ಹತಾ ಪತ್ರವನ್ನು ನಿಟ್ಟೂರು ಗ್ರಾಮದ ಕೆ.ಎಸ್. ಡಿಕ್ಕಿ, ಕೋತೂರು ಗ್ರಾಮದ ಎಂ.ಎA. ವಿಲಾಸಿನಿ, ಹುದಿಕೇರಿ ಗ್ರಾಮದ ಎಂ.ಎ. ಗಣಪತಿ, ಗೋಣಿಕೊಪ್ಪದ ಹೆಚ್.ಆರ್. ಮಧು ಇವರುಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುದಾನದ ಅರ್ಹತಾ ಪತ್ರವನ್ನು ನೀಡಿದರು.

ಈ ಸಂದರ್ಭ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ಹಾಜರಿದ್ದರು.