ಗೋಣಿಕೊಪ್ಪ ವರದಿ, ಜು. ೩೧ : ನಂದಿನಿ ಕ್ರಿಯೇಷನ್ಸ್ ವತಿಯಿಂದ ಆಯೋಜಿಸಿದ್ದ ಮಿಸಸ್ ಸೌತ್ ಇಂಡಿಯನ್ ಸ್ಪರ್ಧೆಯ ಫೈನಲ್‌ನಲ್ಲಿ ಗೆಲುವು ಪಡೆದುಕೊಂಡಿರುವ ಬಾಳಾಜಿ ಗ್ರಾಮದ ಕೊಣಿಯಂಡ ಕಾವ್ಯ ಸಂಜು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರು ಶೆರಟಾನ್ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಅಂತಿಮ ಹಣಾಹಣಿಯಲ್ಲಿ ಕಾವ್ಯ ಸಂಜು ಮಿಸಸ್ ಸೌತ್ ಇಂಡಿಯನ್ ವಿನ್ನರ್ ಆಗಿ ಆಯ್ಕೆಯಾದರು. ಇದರೊಂದಿಗೆ ಬೆಸ್ಟ್ ಆಟಿಟ್ಯೂಡ್ ಸ್ಥಾನ ಕೂಡ ಪಡೆದುಕೊಂಡರು. ಪ್ರತಿಭಾನ್ವೇಷಣೆ, ವೆಸ್ಟರ್ನ್ ಕಲೆ, ಕ್ಯಾಟ್‌ವಾಕ್, ಪ್ರಶ್ನೋತ್ತರ, ಸೀರೆ ಉಡುಗೆ ಸ್ಪರ್ಧೆಗಳಲ್ಲಿ ನೀಡಿದ ಉತ್ತಮ ಪ್ರದರ್ಶನ ಮಿಸಸ್ ಸೌತ್ ಇಂಡಿಯನ್ ವಿನ್ನರ್ ಪ್ರಶಸ್ತಿ ಪಡೆಯಲು ಕಾರಣವಾಯಿತು. ಇದೀಗ ಕಾವ್ಯ ರಾಷ್ಟಿçÃಯ ಸ್ಪರ್ಧೆಗೆ ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.